More

    4ನೇ ದಿನದ ಮೇಕೆದಾಟು ಪಾದಯಾತ್ರೆಯ ಅರ್ಧ ದಾರಿಯಲ್ಲೇ ಹಿಂತಿರುಗಿದ ಸಿದ್ದರಾಮಯ್ಯ!

    ರಾಮನಗರ: ನಾಲ್ಕನೇ ದಿನದ ಮೇಕೆದಾಟು ಪಾದಯಾತ್ರೆಯ ಅರ್ಧ ದಾರಿಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆನ್ನು‌ ನೋವಿನಿಂದಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ‌.

    ಮೊಲದ ದಿನ ಮೇಕೆದಾಟು ಹೋರಾಟದಲ್ಲಿ‌ ಭಾಗವಹಿಸಿದ್ದ ಸಿದ್ದು, ಎರಡನೇ ದಿನ ಅನಾರೋಗ್ಯದಿಂದ ವಾಪಸ್​ ಆಗಿದ್ದರು. ಮೂರನೇ ದಿನ ಭಾಗವಹಿಸಿದ್ದ ಅವರು, ನಾಲ್ಕನೇ ದಿನ ಕೃಷ್ಣಾಪುರದೊಡ್ಡಿವರೆಗೂ ಬಂದು ಅಲ್ಲಿಂದ ಕಾರಿನ ಮೂಲಕ ಬೆಂಗಳೂರಿಗೆ ಸಿದ್ದು ವಾಪಸ್ಸಾಗಿದ್ದಾರೆ. ನಾಳೆ(ಗುರುವಾರ) ಬೆಳಗ್ಗೆ ಪಾದಾಯಾತ್ರೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ನಾಲ್ಕನೇ ದಿನದ ಪಾದಯಾತ್ರೆ ಬುಧವಾರ ರಾತ್ರಿ ರಾಮನಗರ ನಗರ ಪ್ರವೇಶಿಸಲಿದೆ. ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ಬಿಡದಿಯ ಈಗಲ್ಟನ್ ರೆಸಾರ್ಟ್‌, ವಂಡರ್ ಲಾಗಳಲ್ಲಿ‌ ರೂಂ ಬುಕ್ ಮಾಡಲಾಗಿದೆ. ಬಿಡದಿಯಲ್ಲಿ ಡಿಕೆಶಿ ಒಡೆತನದ ಐಕಾನ್ ಕಾಲೇಜು, ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಅವರಿಗೆ ಸೇರಿದ ಜ್ಞಾನ ವಿಕಾಸ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎರಡನೇ ಹಂತದ ನಾಯಕರಿಗಾಗಿ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ರಾಮನಗರದ ಲಾಡ್ಜ್​ಗಳೆಲ್ಲವೂ ಬಹುತೇಕ ಬುಕ್ ಆಗಿವೆ.

    ಮೇಕೆದಾಟು ಪಾದಯಾತ್ರೆ ತಡೆಗೆ ಪಿಐಎಲ್​: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹಿಗ್ಗಾಮುಗ್ಗಾ ತರಾಟೆ

    ಕರುಳ ಕುಡಿಯನ್ನೇ ಕೊಚ್ಚಿ ಕೊಂದ ತಾಯಿ! ಆಕೆ ಮೈಮೇಲೆ ದೇವರು ಬರುತ್ತಿತ್ತಂತೆ… ಮೈಸೂರು ಜಿಲ್ಲೇಲಿ ಅಮಾನವೀಯ ಘಟನೆ

    ಮೇಕೆದಾಟು ಪಾದಯಾತ್ರೆ: ಬೆಂಗ್ಳೂರು-ಮೈಸೂರು ಹೆದ್ದಾರೀಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts