More

    ಗಾರೆ ಕೆಲಸಗಾರರೊಬ್ಬರ ಪ್ರಾಣ ತೆಗೆದ ‘ಲೇಡಿ-ಡಾಗ್’; ಜೀವಕ್ಕೇ ಕುತ್ತು ತಂತು ಕುತ್ತಿಗೆಗೆ ಕಚ್ಚಿದ ನಾಯಿ!

    ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಓಡಾಡುವವರಿಗೆ ಬೀದಿ ನಾಯಿಗಳ ಉಪಟಳ ಗೊತ್ತಿರುವಂಥದ್ದೇ. ಆದರೆ ಇಲ್ಲಿ ಹಾಡಹಗಲೇ ಸಾಕುನಾಯಿಯಿಂದಲೇ ಪ್ರಾಣಕ್ಕೆ ಸಂಚಕಾರ ಉಂಟಾಗಿದೆ. ಗಾರೆ ಕೆಲಸಗಾರರೊಬ್ಬರು ಒಬ್ಬ ಮಹಿಳೆ ಹಾಗೂ ನಾಯಿಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವಂತಾಗಿದೆ.

    ಹೀಗೊಂದು ದುರಂತ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು ಬಡಾವಣೆಯಲ್ಲಿ ಇಂದು ಬೆಳಗ್ಗೆ ಈ ಪ್ರಕರಣ ಸಂಭವಿಸಿದೆ. ನಾಯಿ ಕಚ್ಚಿದ್ದರಿಂದ ಅಟ್ಟೂರು ಬಡಾವಣೆಯ ಗಾರೆ ಕೆಲಸಗಾರ ನರಸಿಂಹ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    ಯುವತಿಯೊಬ್ಬಳು ತಾನು ಸಾಕಿದ್ದ ನಾಯಿಯನ್ನು ಕರೆದುಕೊಂಡು ಇಂದು ವಾಕಿಂಗ್​ಗೆ ಬಂದಿದ್ದಳು. ಈ ವೇಳೆ ಆಕೆಯಿಂದ ತಪ್ಪಿಸಿಕೊಂಡ ನಾಯಿ ಅಲ್ಲೇ ಪಕ್ಕದಲ್ಲಿದ್ದ ಗಾರೆ ಕೆಲಸಗಾರ ನರಸಿಂಹ ಅವರ ಮೇಲೆರಗಿ ಅವರ ಕುತ್ತಿಗೆಗೇ ಕಚ್ಚಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ನರಸಿಂಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಅವರ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಯಿಯನ್ನು ವಾಕಿಂಗ್​ಗೆ ಕರೆತಂದು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಯುವತಿಯನ್ನು ಸ್ಥಳೀಯ ಕೆಲವು ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಕ್ರಿಕೆಟ್​ ಕಿರಿಕ್​ಗೆ ಉರುಳಿತು ಜೀವಂತ ವಿಕೆಟ್​; ಕಾರ್​ ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts