ಹುಲಿಯೂರುದುರ್ಗ(ಕುಣಿಗಲ್): ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಬೈಕ್ನಲ್ಲಿ ವಾಪಸ್ ಗಂಡನ ಮನೆಗೆ ಹೊರಟಿದ್ದಳು. ಅತ್ತ ಗಂಡನೂ ಹೆಂಡತಿ-ಮಗನಿಗಾಗಿ ಕಾಯುತ್ತಿದ್ದ. ಆದರೆ, ಮಾರ್ಗಮಧ್ಯೆ ಸರಗಳ್ಳರ ರೂಪದಲ್ಲಿ ಎದುರಾದ ಮೃತ್ಯು ಆ ಮಹಿಳೆಯ ಪ್ರಾಣ ಹೊತ್ತೊಯ್ದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗದ ಮೇದರದೊಡ್ಡಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಚನ್ನಪಟ್ಟಣ ತಾಲೂಕು ನಾಗವಾರ ಗ್ರಾಮದ ವಸಂತಾ ಎಂಬುವವರು ಇತ್ತೀಚಿಗೆ ಕುಣಿಗಲ್ ತಾಲೂಕಿನ ಹಂದಲಗೆರೆಯ ತವರು ಮನೆಗೆ ಹೋಗಿದ್ದರು. ಲಾಕ್ಡೌನ್ ಸಡಿಲಗೊಂಡ ಹಿನ್ನೆಲೆ ನಿನ್ನೆ ತನ್ನ ಮಗನನೊಂದಿಗೆ ಬೈಕ್ನಲ್ಲಿ ಹಿಂಬದಿ ಕೂತು ಗಂಡನ ಮನೆಗೆ ಹೋಗುತ್ತಿದ್ದರು. ತುಮಕೂರು-ರಾಮನಗರ ಜಿಲ್ಲಾ ಗಡಿ ಪ್ರದೇಶ ಮೇದರದೊಡ್ಡಿ ಬಳಿ ಬೈಕ್ನಲ್ಲಿ ಬಂದ ಕಳ್ಳರಿಬ್ಬರು ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಹಿಂಬದಿಯಿಂದ ಬಂದು ವಸಂತಾರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಸರ ಎಳೆಯುವಾಗ ಆಯತಪ್ಪಿ ಬೈಕ್ನಿಂದ ಕೆಳಗೆ ಬಿದ್ದ ವಸಂತಾ(38) ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಾದ ಕೆಲವೇ ಗಂಟೆಯಲ್ಲಿ ರಾಮನಗರ ಗ್ರಾಮಾಂತರ ವ್ಯಾಪ್ತಿಯ ಅಕ್ಕೂರು ಗ್ರಾಮದಲ್ಲೂ ಸರಗಳ್ಳರು ತೋಟಕ್ಕೆ ತೆರಳುತ್ತಿದ್ದ ವೆಂಕಟಲಕ್ಷ್ಮಮ್ಮ (55) ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಆ ಮಹಿಳೆಯೂ ಕೆಳಗೆ ಬಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ