ಬೆಂಗಳೂರು: ವೀಕೆಂಡ್ ಕರ್ಫ್ಯೂ ಮಾದರಿಯಲ್ಲೇ ನಾಳೆ(ಏ.27) ರಾತ್ರಿ 9ರಿಂದ ಮೇ 10ರ ವರೆಗೆ ಕರ್ನಾಟಕ ಲಾಕ್ ಆಗಲಿದೆ. ಜನರ ಓಡಾಟಲೂ ಇರಲ್ಲ, ವಾಹನ ಸಂಚಾರವೂ ಇರುವುದಿಲ್ಲ.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಲ್ಲಿಯೂ ಲಾಕ್ಡೌನ್ ಎಂಬ ಪದ ಬಳಸಲಿಲ್ಲ. ಆದರೆ, ವೀಕೆಂಡ್ ಕರ್ಫ್ಯೂ ಮಾದರಿಯಲ್ಲೇ ಕರ್ನಾಟಕದಾದ್ಯಂತ ಟೈಟ್ ರೂಲ್ಸ್ ಜಾರಿ ಆಗಲಿದೆ. ಮಹಾರಾಷ್ಟ್ರಕ್ಕಿಂತ ಬೆಂಗಳೂರು ಪರಿಸ್ಥಿತಿ ಘೋರವಾಗಿದೆ. ಎರಡು ವಾರದ ಬಳಿಕವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದೊಳಗೆ ಗೂಡ್ಸ್ ವಾಹನ ಸಂಚಾರಕ್ಕಿಲ್ಲ ಅಡ್ಡಿ. ಉಳಿದಂತೆ ಎಲ್ಲ ವಾಹನಗಳ ಓಡಾಟಕ್ಕೆ ಬ್ರೇಕ್ ಬೀಳಲಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಸಂಚಾರ ಬಂದ್ ಆಗಲಿದೆ. ರಾಜ್ಯಕ್ಕೆ ಎಂಟ್ರಿ ಮತ್ತು ಎಕ್ಸಿಟ್ಗೆ ಬ್ರೇಕ್ ಬಿದ್ದಿದೆ.
ಕಾರಿನಲ್ಲೇ ಟಿವಿ ಸೀರಿಯಲ್ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ
ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ