ಒಟ್ಟಾವ: ಕೆನಡಾದಲ್ಲಿ ಸೋಮವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಜಾರಿಯಾಗಿರುವ ಕಟ್ಟುನಿಟ್ಟಿನ ನಿಯಮಗಳನ್ನು ವಿರೋಧಿಸಿ ಟ್ರಕ್ ಚಾಲಕರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆ ಶಮನಗೊಳಿಸಲು ಪ್ರಧಾನಿ ಜಸ್ಟಿನ್ ಟ್ರುಡೊ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಕೋವಿಡ್ ನಿರ್ಬಂಧಗಳನ್ನ ತೆಗೆಯುವಂತೆ ಆಗ್ರಹಿಸಿ ಕೆನಾಡಲ್ಲಿ ಟ್ರಕ್ಕರ್ಗಳ ನೇತೃತ್ವದಲ್ಲಿ 2 ವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಇಡೀ ರಾಷ್ಟ್ರಾದ್ಯಂತ ಹಬ್ಬಿದ್ದು, ಕೆನಡಾ ರಾಜಧಾನಿ ಒಟ್ಟಾವ ಸ್ತಬ್ಭಗೊಂಡಿತ್ತು. ಒಟ್ಟಾವದಲ್ಲಿ ಟ್ರಕ್ಗಳ ದಿಗ್ಭಂಧನ, ಪ್ರತಿಭಟನೆಯಿಂದಾಗಿ ಗಡಿ ಭಾಗವೂ ಸ್ತಬ್ಧಗೊಂಡಿದೆ. ಕೆನಡಾ-ಅಮೆರಿಕ ಗಡಿಗೆ ದಿಗ್ಭಂಧನ ಬಿದ್ದಿದೆ. ವಹಿವಾಟು ನಡೆಯದೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆನಡಾ ಮತ್ತು ಯುನೈಟೆಟ್ ಸ್ಟೇಟ್ಸ್ ನಡುವಿನ ಗಡಿ ದಾಟಲು ಕರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಕೆನಡಾ ಸರ್ಕಾರ ಆದೇಶಿದೆ. ಈ ನಿಯಮ ವಿರೋಧಿಸಿ ಕೆನಡಾದಲ್ಲಿ ಟ್ರಕ್ಕರ್ಗಳು ಪ್ರತಿಭಟನೆ ನಡೆಸುತ್ತಿದ್ದರು. ನಿಯಮ ಉಲ್ಲಂಘಿಸಿ ಬಂದೂಕುದಾರಿಗಳಾಗಿ 11 ಪ್ರತಿಭಟನಾಕಾರರು ಗಡಿ ದಾಟಲು ಯತ್ನಿಸಿದ್ದರು. ಅಪಾಯದ ಮಟ್ಟಕ್ಕೆ ತಲುಪಿದ ಪ್ರತಿಭಟನೆಯನ್ನ ತತಡೆಯಲು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
1970ರ ಅಕ್ಟೋಬರ್ನಲ್ಲಿ ಭಯೋತ್ಪಾದನಾ ಬಿಕ್ಕಟ್ಟನ್ನು ತಡೆಯಲು ಜಸ್ಟಿನ್ ಟ್ರುಡೊ ಅವರ ತಂದೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರು ಕೆನಡಾದಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೊಷಿಸಿದ್ದರು. 2ನೇ ಬಾರಿಗೆ ಅಂದರೆ 50 ವರ್ಷದ ಬಳಿಕ ಇದೀಗ ಇವರ ಪುತ್ರ ಜಸ್ಟಿನ್ ಟ್ರುಡೊ ತುರ್ತು ಪರಿಸ್ಥಿತಿ ಅಸ್ತ್ರ ಬಳಿಸಿದ್ದಾರೆ.
ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ
ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್ ಕಂಡಕ್ಟರ್ ಹೆಸ್ರಲ್ಲೂ ಲೋನ್ ಪಡೆದು ವಂಚನೆ