ಧಾರವಾಡ: ಇಂದು ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರ ಆಪ್ತ ಯು.ಬಿ. ಶೆಟ್ಟಿ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ಗೋವಾದಿಂದ ಬಂದಿರುವ ಐಟಿ ಅಧಿಕಾರಿಗಳು ಧಾರವಾಡ ನಗರದ ದಾಸನಕೊಪ್ಪ ಸರ್ಕಲ್ನಲ್ಲಿರುವ ಗುತ್ತಿಗೆದಾರ ಯು.ಬಿ.ಶೆಟ್ಟಿ ಅವರ ಮನೆಯಲ್ಲಿ ತಪಾಸಣೆ ಮಾಡುತ್ತಿದ್ದಾರೆ. ಧಾರವಾಡ ಕಾಂಗ್ರೆಸ್ನ ಮುಖಂಡರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ್ ಅವನ್ನು ಯು.ಬಿ. ಶೆಟ್ಟಿ ನಿವಾಸಕ್ಕೆ ಬರುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಯು.ಬಿ.ಶೆಟ್ಟಿ ನಿವಾಸಕ್ಕೆ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ ಇಬ್ಬರೂ ಆಗಮಿಸಿದ್ದು, ಐಟಿ ಅಧಿಕಾರಿಗಳು ಇಬ್ಬರನ್ನೂ ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ. ರಾಬರ್ಟ್ ದದ್ದಾಪುರಿ ಅವರು ಡಿಕೆಶಿಯ ಪರಮಾಪ್ತ.
ಕುಡಿವ ನೀರಿನ ಪೈಪ್ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…
ಮಿಸ್ ಯೂ ಫ್ರೆಂಡ್ಸ್, ನಾನು ಸಾಯುವೆ, ನನ್ನ ಬ್ಯಾನರ್ ಹಾಕಿ… ಎಂದು ಸಂದೇಶ ಕಳಿಸಿ ಪ್ರಾಣಬಿಟ್ಟ ವಿದ್ಯಾರ್ಥಿ
ಅಣ್ಣನಿಂದಲೇ ಕೊಲೆಯಾದ ನವವಿವಾಹಿತೆ! ಮೊದಲೇ ನೊಂದಿದ್ದ ಆ ಜೀವಕ್ಕೆ ಬದುಕಲು ಬಿಡಲೇ ಇಲ್ಲ…