ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ವರುಣನ ಆರ್ಭಟ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ತಾಲೂಕಿನಲ್ಲಿ ನಿನ್ನೆ ರಾತ್ರಿಯಿಡೀ ಸುರಿ ಧಾರಾಕಾರ ಮಳೆಗೆ ಚೋರ್ಲಾ ಘಾಟ್ನಲ್ಲಿ ಭೂ ಕುಸಿತವಾಗಿದ್ದು, ಕರ್ನಾಟಕ-ಗೋವಾ ನಡುವೆ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಕಣಕುಂಬಿ ಮಾವುಲಿ ದೇವಾಲಯ ಬಳಿ ಮಳೆಯ ನೀರು ರಸ್ತೆಯನ್ನು ಸೀಳಿಕೊಂಡು ಹರಿಯುತ್ತಿದೆ. ಖಾನಾಪುರ ತಾಲೂಕಿನ ಬಹುತೇಕ ಕಡೆ ರಸ್ತೆ ಮತ್ತು ಸೇತುವೆಗಳು ಮುಳುಗಡೆಯಾವಗಿವೆ.
ಖಾನಾಪುರ ಪಟ್ಟಣದ ಬೆಳಗಾವಿ- ಪಣಜಿ ಹೆದ್ದಾರಿ ಮೇಲಿನ ಸೇತುವೆಯೂ ಜಲಾವೃತಗೊಂಡಿದೆ. ಲೋಂಡಾ, ರುಮೇವಾಡಿ ಮತ್ತು ಖಾನಾಪುರ ಪಟ್ಡಣದ ಜನವಸತಿ ಪ್ರದೇಶಗಳಿಗೂ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!
ಅಂಕೋಲಾದಲ್ಲಿ ಪ್ರವಾಹ: ನೀರಲ್ಲಿ ಮುಳುಗುತ್ತಿದೆ ಹೋಟೆಲ್… ಪ್ಲೀಸ್ ಯಾರಾದ್ರೂ ನಮ್ಮನ್ನು ಸ್ಥಳಾಂತರಿಸಿ
ನಡುರಸ್ತೆಯಲ್ಲೇ ಜಲದಿಗ್ಬಂಧನ! ಕುಡಿವ ನೀರು-ಊಟ ಇಲ್ಲದೆ 30ಕ್ಕೂ ಹೆಚ್ಚು ಮಂದಿ ಪರದಾಟ