More

    ಕಿಗ್ಗಾದಲ್ಲಿ ವೈಭವದ ರಥೋತ್ಸವ

    ಶೃಂಗೇರಿ: ಮಳೆದೇವರು ಕಿಗ್ಗಾ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ರಥೋತ್ಸವ ಭಾನುವಾರ ವೈಭವದಿಂದ ನೆರವೇರಿತು.

    ಮುಂಜಾನೆ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಹಾಗೂ ಶಾಂತಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರಮೂರ್ತಿಯನ್ನು ದೇವಸ್ಥಾನಕ್ಕೆ ಹಾಗೂ ರಥಕ್ಕೂ ಮೂರು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಹರಕೆ ಸಲ್ಲಿಸಿದರು. ಮಂಗಳಾರತಿ ನಂತರ ರಥವನ್ನು 100 ಮೀಟರ್ ದೂರದವರೆಗೆ ಎಳೆಯಲಾಯಿತು. ರಸ್ತೆಗಳ ಇಕ್ಕೆಲೆಗಳಲ್ಲಿ ತಳಿರುತೋರಣಗಳು, ರಂಗವಲ್ಲಿಗಳು, ಬಣ್ಣಬಣ್ಣದ ಛತ್ರಿಗಳು ಉತ್ಸವದ ಮೆರುಗು ಹೆಚ್ಚಿಸಿದವು. ಮಹಾರಥೋತ್ಸವಕ್ಕೆ ಭಕ್ತರ ದಂಡು ಬಂದಿತ್ತು. ರಾತ್ರಿ ಪುನಃ ರಥವನ್ನು ದೇವಸ್ಥಾನದವರೆಗೆ ಎಳೆಯಲಾಯಿತು. ಗೌರಿಗದ್ದೆ ಅವಧೂತ ವಿನಯ್ ಗುರೂಜಿ ರಥೋತ್ಸವದಲ್ಲಿ ಭಾಗಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts