ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವೈಭವಯುತವಾಗಿ ಜರುಗಿತು.
ಬಲಿಪಾಢ್ಯಮಿಯಂದು ಕಣ್ಣುಧಾರಣೆಯೊಂದಿಗೆ (ನ.5ರಂದು) ಆರಂಭವಾದ ಗಣೇಶ ಉತ್ಸವವು ಡಿ.10ರವರೆಗೆ ನಡೆದಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಆರಂಭವಾದ ಉತ್ಸವವು ಭಾನುವಾರ ಸಂಜೆ ಸಂಪನ್ನಗೊಂಡಿತು.
ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದರು. ಉತ್ಸವದ ಬಳಿಕ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೂಳೂರು ಕೆರೆಯಲ್ಲಿ ಸಂಜೆ ಸೂರ್ಯಾಸ್ತಮಾನಕ್ಕೂ ಮುನ್ನ ವಿಸರ್ಜಿಸಲಾಯಿತು. ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ ಗಮನಸೆಳೆಯಿತು.
ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಹಾಗೂ ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾ ಮಂಗಳಾರತಿ ನೆರವೇರಿಸಲಾಯಿತು. 18 ಕೋಮಿನ ಜನರು ಮಹಾಗಣಪತಿಯನ್ನು ದೇವಾಲಯಲದ ಗೋಪುರದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ರಾತ್ರಿ 11.30ರವರೆಗೂ ಮೆರವಣಿಗೆ ನಡೆಸಿದರು.
ವರ್ಷದಲ್ಲಿ 2ನೇ ಬಾರಿ ಉತ್ಸವ!: ಗಣೇಶೋತ್ಸವವು ಪ್ರತಿ ವರ್ಷ 1 ತಿಂಗಳು ನಡೆಯುತ್ತಿತ್ತು. ಕಳೆದ ಬಾರಿ ಗ್ರಾಪಂ ಚುನಾವಣೆ ಹಾಗೂ ಅಕಾಲಿಕ ಮಳೆ ಕಾರಣ 2 ತಿಂಗಳು ವಿಸರ್ಜನಾ ಮಹೋತ್ಸವವನ್ನು ಮುಂದೂಡಲಾಗಿತ್ತು. 2021ರ ಜ.23ರಂದು ಶನಿವಾರ ರಾತ್ರಿಯಿಂದ ಆರಂಭವಾದ ಮಹಾಗಣಪತಿ ಉತ್ಸವವು ಎರಡು ದಿನ ನಡೆದಿತ್ತು. ಈ ವರ್ಷ ಮತ್ತೆ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವವು ನಡೆದಿದ್ದು 2ನೇ ಬಾರಿ ಮಹಾಗಣಪತಿ ಉತ್ಸವ ನಡೆದಿರುವುದು ವಿಶೇಷವೆನಿಸಿದೆ.
ಬಿಆರ್ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು
ನಾನು ಇರೋವರೆಗೂ ರಂಗನಾಥ್ ಅವರೇ ಕುಣಿಗಲ್ನ ಕಾಂಗ್ರೆಸ್ ಅಭ್ಯರ್ಥಿ ಎಂದ ಡಿಕೆಸು ವಿರುದ್ಧ ಎಸ್ಪಿಎಂ ಗರಂ
ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ