More

    ಯುವಕನಿಗೆ ‘ಮೂತ್ರ ನೆಕ್ಕಿಸಿದ್ದ’ ಪಿಎಸ್​ಐ ಬಂಧನ

    ಚಿಕ್ಕಮಗಳೂರು: ದಲಿತ ಯುವಕನೊಬ್ಬನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್​ ಠಾಣೆ ಪಿಎಸ್​ಐ ಅರ್ಜುನ್​ ಅವರನ್ನು ನಿನ್ನೆ(ಬುಧವಾರ) ರಾತ್ರಿ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ವಿವಾಹಿತ ಮಹಿಳೆಗೆ ಫೋನ್​ ಮಾಡಿದ್ದ ಆರೋಪದ ಮೇಲೆ ಮೇ 10ರಂದು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ನಿವಾಸಿ ಪುನೀತ್​ನನ್ನು ವಿಚಾರಣೆಗಾಗಿ ಅರ್ಜುನ್​ ಠಾಣೆಗೆ ಕರೆದೊಯ್ದಿದ್ದರು. ‘ಅಂದು ನನ್ನನ್ನು ಠಾಣೆಗೆ ಕರದೊಯ್ದು ಪಿಎಸ್​ಐ ಥಳಿಸಿದ್ದರು. ಕುಡಿಯೋಕೆ ನೀರು ಕೇಳಿದರೂ ಕೊಡದೆ, ವ್ಯಕ್ತಿಯೊಬ್ಬನಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ಕೆಳಗೆ ಬಿದ್ದ ಮೂತ್ರವನ್ನೂ ನನ್ನಿಂದ ಬಲವಂತವಾಗಿ ನೆಕ್ಕಿಸಿದ್ದರು’ ಎಂದು ಆರೋಪಿಸಿ ಪುನೀತ್​ ಮೇ 22ರಂದು ಪಿಎಸ್​ಐ ವಿರುದ್ಧ ದೂರು ಕೊಟ್ಟಿದ್ದರು.

    ಎಫ್​ಐಆರ್​ ದಾಖಲಾಗುತ್ತಿದ್ದಂತೆ ಈ ಪ್ರಕರಣ ಸಂಬಂಧ ಮೇ.23ರಂದು ಪಿಎಸ್​ಐ ಅವರನ್ನ ಕೆಲಸದಿಂದ ಅಮಾನತು ಮಾಡಲಾಗಿತ್ತು. ತಲೆ ಮರೆಸಿಕೊಂಡಿದ್ದ ಅರ್ಜುನ್​, ನಿರೀಕ್ಷಣಾ ಜಾಮೀನು ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಈ ಅರ್ಜಿ ವಜಾಗೊಂಡಿತ್ತು. ಸೆ.1ರ ರಾತ್ರಿ ಬೆಂಗಳೂರಲ್ಲಿ ಸಿಐಡಿ ಪೊಲೀಸರ ಕೈಗೆ ಆರೋಪಿ ಅರ್ಜುನ್​ ಸಿಕ್ಕಿಬಿದ್ದಿದ್ದಾರೆ.

    ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…

    ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಪಿಎಸ್​ಐ ವಿರುದ್ಧ ಎಫ್​ಐಆರ್​ ದಾಖಲು

    https://analytics.google.com/analytics/web/#/realtime/rt-content/a68800707w105668156p109974274/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts