More

    ಯಾರು ಮಾತನಾಡಿಸಿದ್ರೂ ಸ್ಪಂದಿಸುತ್ತಿರಲಿಲ್ಲ… ರವಿಚಂದ್ರನ್​ರ ಧ್ವನಿ ಕೇಳಿ ಅಮ್ಮನಿಗೆ ಎಚ್ಚರ ಆಗ್ತಿತ್ತು…

    ಬೆಂಗಳೂರು: ಚಂದನವನದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಕ್ರೇಜಿಸ್ಟಾರ್​ ವಿ. ರವಿಚಂದ್ರನ್​ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಇನ್ನಿಲ್ಲ. ತಾಯಿಯನ್ನು ಕಳೆದುಕೊಂಡ ಕುಟುಂಬವೀಗ ಶೋಕಸಾಗರದಲ್ಲಿ ಮುಳುಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ ಅವರು ಮೂರ್ನಾಲ್ಕು ವರ್ಷಗಳಿಂದ ಮಾತು ನಿಂತಿತ್ತು. ಯಾರು ಮಾತನಾಡಿಸಿದರೂ ಸ್ಪಂದಿಸುತ್ತಿರಲಿಲ್ಲ… ಆದರೆ, ರವಿಚಂದ್ರನ್​ ಅವರ ಧ್ವನಿ ಕೇಳಿದ್ರೆ ಎಚ್ಚರಗೊಳ್ಳುತ್ತಿದ್ದ ತಾಯಿ, ಕಣ್ಣುಬಿಟ್ಟು ನೋಡುತ್ತಿದ್ದರು…

    ಹೌದು, ಈ ಬಗ್ಗೆ ಸ್ವತಃ ರವಿಚಂದ್ರನ್​ ಅವರೇ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ನಾನು ಅಮ್ಮನ ಕೈ ಮುಟ್ಟಿದರೆ ಎಚ್ಚರ ಆಗುತ್ತಾರೆ, ನನ್ನ ಧ್ವನಿ ಕೇಳಿದ್ರೆ ಕಣ್ಣುಬಿಟ್ಟು ನೋಡುತ್ತಾರೆ… ಎಂದಿದ್ದರು. ನಟ ಪುನೀತ್​ ರಾಜ್​ಕುಮಾರ್​ ಅವರು ನಿಧನರಾದ ದಿನವೂ ಪುಟ್ಟಮ್ಮಾಳ್​ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು.ಅಮ್ಮನ ಚೇತರಿಕೆಗಾಗಿ ರವಿಚಂದ್ರನ್​ ಕುಟುಂಬ ತೀವ್ರಾ ನಿಗಾ ವಹಿಸಿತ್ತಾದರೂ ಫಲಿಸಲಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.

    ಅಂತಿಮ ದರ್ಶನ: ರಾಜಾಜಿನಗರದಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಪಟ್ಟಮ್ಮಾಳ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ರ ನಂತರ ಗಾಯತ್ರಿ ನಗರದಲ್ಲಿರುವ ಹರಿಶ್ಚಂದ್ರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ಯೂಕ್ರೇನ್​ಗೆ ಸೇರಿದ್ದ ವಿಶ್ವದ ಅತಿದೊಡ್ಡ ವಿಮಾನವನ್ನೂ ನಾಶ ಮಾಡಿದ ರಷ್ಯಾ ಸೇನೆ!

    ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts