More

    ಭಜರಂಗಿ 2 ಪ್ರೀ ರಿಲೀಸ್​ ದಿನವೇ ಅಪ್ಪು ಡಲ್​ ಆಗಿದ್ದರು… ಪುನೀತ್​ ಸಾವಿನ ಬಳಿಕ ಸ್ಫೋಟಕ ವಿಚಾರ ಬಿಚ್ಚಿಟ್ಟ ಶಿವಣ್ಣ

    ಬೆಂಗಳೂರು: ನಟ ಪುನೀತ್ ​ರಾಜ್​ಕುಮಾರ್​ ನಿಧನ ಆಗಿ 5 ದಿನ ಕಳೆದಿದ್ದರೂ ಅವರ ಅಗಲಿಕೆಯನ್ನ ಒಪ್ಪಿಕೊಳ್ಳೋಕೆ ಯಾರೂ ಸಿದ್ಧರಿಲ್ಲ. ಅಪ್ಪು ಇನ್ನು ನೆನಪು ಮಾತ್ರ ಎಂಬುದು ಕಹಿ ಸತ್ಯವಾದರೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಪುನೀತ್​ ನೀವು ಇಷ್ಟು ಬಾರದ ಲೋಕಕ್ಕೆ ಏಕೆ ಹೋದಿರಿ? ಏನಾಯ್ತು ನಿಮಗೆ? ಕನಸಲ್ಲೂ ನೀವು ನಮ್ಮನ್ನೆಲ್ಲ ಬಿಟ್ಟು ಹೋಗ್ತೀರಿ ಎಂದು ಎಣಿಸಿರಲಿಲ್ಲ ಎಂದು ಕೋಟ್ಯಂತರ ಮನದಲ್ಲಿ ಪ್ರಶ್ನೆಗಳು ಮೂಡಿವೆ. ನಿತ್ಯ ಪುನೀತ್​ ನಿವಾಸದ ಬಳಿ ಸಾಕಷ್ಟು ಮಂದಿ ಬಂದು ದುಃಖ ತೋಡಿಕೊಳ್ಳುತ್ತಿದ್ದಾರೆ. ಬುಧವಾರವೂ ಅಪ್ಪು ನಿವಾಸದ ಬಳಿ ಅಭಿಮಾನಿಗಳು ಮತ್ತು ನಟರು ಬರುವಿಕೆ ನಿರಂತರವಾಗಿದೆ. ಇದೇ ವೇಳೆ ಪುನೀತ್​ರ ಸಹೋದರ ಶಿವರಾಜ್​ಕುಮಾರ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ‘ಅಪ್ಪು ಹಾಗೂ ಶಿವರಾಜ್ ಕುಮಾರ್ ಒಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ ದಿನವೇ ಅಪ್ಪು ಡಲ್‌ ಆಗಿದ್ದ’ ಅಂತ ಗೀತಾ ಹೇಳಿದ್ರು. ಏನೋ ಸುಸ್ತು ಆಗಿರ್ಬೇಕು ಅಂತ ಅದ್ಕೊಂಡ್ವಿ. ಯಾರಿಗೂ ಒಂಚೂರು ಇಂಟ್ ಇರಲಿಲ್ಲ. ಹಾಗೇ ಗೊತ್ತಾಗಿದ್ರೆ ಬಿಡ್ತಾ ಇದ್ವಾ? ಅವತ್ತು ವಿಧಿ ಅಪ್ಪುಗೆ ಇನ್ನೊಂದು ಹತ್ತು ನಿನಿಷ ಟೈಂ ಕೊಡಬೇಕಿತ್ತು… ಎನ್ನುತ್ತಲೇ ಶಿವಣ್ಣ ಕಣ್ಣೀರು ಹಾಕಿದ್ರು. ಅ.27ರಂದು ಭಜರಂಗಿ 2 ಸಿನಿಮಾ ಪ್ರೀ ರಿಲೀಸ್​ ಕಾರ್ಯಕ್ರಮ ನಡೆದಿತ್ತು. ಅಂದು ಪುನೀತ್​ ರಾಜ್​ಕುಮಾರ್​, ಶಿವರಾಜ್ ಕುಮಾರ್, ಯಶ್​ ವೇದಿಕೆಯಲ್ಲಿ ಡಾನ್ಸ್​ ಮಾಡಿದ್ದರು. ಆ ದಿನ ಅಪ್ಪು ಡಲ್​ ಆಗಿದ್ದರು ಎಂದು ಗೀತಾ ಶಿವರಾಜ್​ಕುಮಾರ್​ ಹೇಳಿದ್ದನ್ನು ಶಿವಣ್ಣ ನೆನಪಿಸಿಕೊಂಡರು.

    ಅಪ್ಪು ನಿಧನದ ನೋವಿಂದ ನಾವೆಲ್ಲ ಹೇಗೆ ಸುಧಾರಿಸಿಕೊಳ್ತೀವಿ ಅಂತ ಗೊತ್ತಿಲ್ಲ. ನೋವು ಕಾಡ್ತಾನೇ ಇರುತ್ತೆ. ಅಭಿಮಾನಿಗಳು, ಸಿನಿಮಾ ಇಂಡಸ್ಟ್ರಿಗೂ ತುಂಬಾ ನೋವಾಗಿದೆ. ನಮ್ಮನ್ನ ಬಿಟ್ಟು ಅಪ್ಪು ಹೇಗೆ ಹೋದ್ರು? ಅಂತ ಎಲ್ಲರೂ ಕೇಳ್ತಾ ಇದ್ದಾರೆ. ರಜನಿಕಾಂತ್ ಪತ್ನಿ ಲತಾ ಮತ್ತು ಅವರ ಪುತ್ರಿ ಕರೆ ಮಾಡಿದ್ರು. ರಜನಿಕಾಂತ್ ಅವರಿಗೂ ಈ ವಿಷ್ಯ ಗೊತ್ತಾಗಿ ತುಂಬಾ ನೋವು ಪಟ್ಟರಂತೆ. ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್ ಆಗಿದ್ದವನು. ಅಪ್ಪು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ. ಅವರಿಬ್ಬರೂ ತುಂಬಾ ಬುದ್ಧಿವಂತರು. ಎಲ್ಲಾ ಕೊಟ್ಟು ಹೋಗಿದ್ದಾನೆ, ನಾವು ಜತೆಯಲ್ಲೇ ಇರ್ತೇವೆ ಎಂದು ಶಿವಣ್ಣ ಭಾವುಕರಾದರು.

    ‘ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?’ ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ‘ಅಪ್ಪು’ ಅಗಲಿಕೆ ನೋವಿನಲ್ಲೇ ನ.10ರಂದು ಮಗಳ ಮದುವೆ… ಭಾವುಕರಾದ ಕುಮಾರ್ ಬಂಗಾರಪ್ಪ

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts