ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅರೆ ಸೇನಾ ಪಡೆಯಲ್ಲಿ (ಟುಟೋರಿಯಲ್ ವಿಭಾಗ) ಕೆಲಸ ಮಾಡುವಾಗ ನಾಪತ್ತೆಯಾಗಿದ್ದ ತನ್ನ ಮಗನನ್ನು ಸತತ ಎಂಟು ತಿಂಗಳಿಂದ ಹುಡುಕಾಡುತ್ತಿರುವ ತಂದೆಯೊಬ್ಬನ ಮನಕಲುಕುವ ಕಥನವಿದು. ಆದರೆ, ಆ ತಂದೆ ಎಂಟು ತಿಂಗಳಿನಿಂದ ಮಗನ ಮೃತ ದೇಹಕ್ಕಾಗಿ ನೆಲ ಅಗೆಯುತ್ತಿದ್ದಾನೆ.
ಹೌದು ಜಮ್ಮು ಕಾಶ್ಮೀರದಲ್ಲಿ 2020 ರ ಆಗಷ್ಟ್ 2 ರಂದು ಅರೆ ಸೇನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಶಾಕೀರ ಮಂಜೂರ್ ಎಂಬ ಸೈನಿಕ ಸ್ನೇಹಿರ ಜೊತೆ ಹೋಗಿ ಬರುತ್ತೇನೆಂದು ಮನೆಯಲ್ಲಿ ತಂದೆ ಅಹ್ಮದ್ ಅವರಿಗೆ ಹೇಳಿ ಹೊರಗೆ ಹೋಗಿದ್ದ. ಆದರೆ, ಮೂರು ದಿನಗಳ ಬಳಿಕ ಕುಲ್ಗಾಮಾದಲ್ಲಿ ಆತನ ವಾಹನ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಅಸಲಿಗೆ ಶಾಕೀರ್ನನ್ನು ಆಗಷ್ಟ್ 2 ರಂದು ಭಯೋತ್ಪಾದಕರು ಅಪಹಿರಿಸದ್ದರು. ತಾನು ಸ್ನೇಹಿತರ ಜೊತೆ ಹೋಗುತ್ತಿರುವುದಾಗಿ ತಂದೆ ಬಳಿ ಭಯೋತ್ಪಾದಕರು ಶಾಕೀರ್ನಿಂದ ಸುಳ್ಳು ಹೇಳಿಸಿದ್ದರು. ಅಪಹರಣ ಆದ ಒಂದು ವಾರದ ಬಳಿಕ ಆತನ ಮನೆಯಿಂದ ಮೂರು ಕಿಮೀ ದೂರ ಶಾಕೀರ್ನ ರಕ್ತಸಿಕ್ತ ಸಮವಸ್ತ್ರ ಪತ್ತೆಯಾಗಿತ್ತು.
ಇದನ್ನೂ ಓದಿ: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ: ಗುಡ್ ನ್ಯೂಸ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್
ಮಗ ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಯಿತು. ಪೊಲೀಸ್ ಹಾಗೂ ಕುಟುಂಬದವರು ಶಾಕೀರ್ನ ಶವಕ್ಕಾಗಿ ಎಷ್ಟೇ ಹುಡುಕಾಡಿದರೂ ಸಿಗಲಿಲ್ಲ. ಕಡೆಗೆ ಶಾಕೀರ್ನ ಸಂಬಂಧಿಯೊಬ್ಬರು ಆತನ ತಂದೆ ಅಹ್ಮದ್ ಬಳಿ ಬಂದು ನಿಮ್ಮ ಮಗ ನನ್ನ ಕನಸಿನಲ್ಲಿ ಬಂದು ಆತನ ಶವ ಇರುವ ಸ್ಥಳವನ್ನು ಹೇಳಿದ್ದಾನೆ ಎಂದು ಆಗಸ್ಟ್ ಕೊನೆಯಲ್ಲಿ ಹೇಳಿದ್ದಳು.
ಇದನ್ನು ನಂಬಿರುವ ತಂದೆ ಕಳೆದ ಎಂಟು ತಿಂಗಳಿನಿಂದ ಮಗ ಶಾಕೀರ್ನ ಶವಕ್ಕಾಗಿ ಭೂಮಿ ಅಗೆಯುತ್ತಿದ್ದಾರೆ. ಆದರೂ ಅವರು ಇನ್ನೂ ತಮ್ಮ ಆಸೆಯನ್ನು ಬಿಟ್ಟಿಲ್ಲ. ಇದಕ್ಕಾಗಿ ಗ್ರಾಮಸ್ಥರೂ ಅಹ್ಮದ್ ಅವರಿಗೆ ಕೈ ಜೋಡಿಸಿದ್ದಾರೆ. ಶಾಕೀರ್ ಶವ ಸಿಗದಿದ್ದರಿಂದ ಸೇನೆಯಲ್ಲಿ ಆತನನ್ನು ಇದುವರೆಗೂ ಹುತಾತ್ಮ ಎಂದು ಘೋಷಣೆ ಮಾಡಲಾಗಿಲ್ಲ. ಈ ಕುರಿತು ಏನೇ ಮಾಹಿತಿ ಸಿಕ್ಕರೂ ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ಪೊಲೀಸ್ ಅಧಿಕಾರಿಳು.
ಇಸ್ರತ್ ಜಹಾನ್ ಎನ್ಕೌಂಟರ್ ಪ್ರಕರಣ: ಕೊನೆಯ ಮೂವರು ಆರೋಪಿಗಳನ್ನೂ ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ
ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…