More

    ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

    ಕಲಬುರಗಿ: 6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಯುವತಿ ಗಂಡನ ಮನೆಯಲ್ಲಿ ದುರಂತ ಅಂತ್ಯ ಕಂಡಿದ್ದು, ಮೃತಳ ಕುಟುಂಬಸ್ಥರು ಮಗಳ ಸಾವಿಗೆ ಆಕೆಯ ಗಂಡ ಮತ್ತು ಮೈದುನನೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಕಲಬುರಗಿ ನಗರದ ಪ್ರಗತಿ ಕಾಲನಿಯಲ್ಲಿ ವಾಸವಿದ್ದ ಲೋಕೇಶ್ ಪತ್ನಿ ಸುಗುಣ(22) ಮೃತ ದುರ್ದೈವಿ. ಸೇಡಂ‌ ಡಿಪೋದಲ್ಲಿ ಕೆಎಸ್​ಆರ್​ಟಿಸಿ ಬಸ್​ ಚಾಲಕನಾಗಿರುವ ಲೋಕೇಶ್​ಗೆ ಸುಗುಣ ಜತೆ 6 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ದಂಪತಿ ಇಬ್ಬರೂ ಕಲಬುರಗಿ ನಗರದ ಪ್ರಗತಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ಜತೆ ಲೋಕೇಶ್​ನ ಸಹೋದರನೂ ವಾಸವಿದ್ದ. ನಿನ್ನೆ(ಗುರುವಾರ) ರಾತ್ರಿ ಸುಗುಣ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಅಳಿಯ ಲೋಕೇಶ್ ಇಲ್ಲದ ಸಮಯದಲ್ಲಿ ಸುಗುಣಗೆ ಲೋಕೇಶ್​ನ ಸಹೋದರ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, 5 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೊಟ್ಟಿದ್ದೆವು. ಆದರೂ ಮತ್ತಷ್ಟು ಹಣಕ್ಕಾಗಿ ಪತ್ನಿಯನ್ನ ಲೋಕೇಶ್ ಪೀಡಿಸುತ್ತಿದ್ದ. ಇವರಿಬ್ಬರೂ ಸೇರಿ ಗುರುವಾರ ರಾತ್ರಿ ಸುಗುಣಲ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಪ್ಯಾನಿಗೆ ಶವ ನೇತು ಹಾಕಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

    ನದಿಯಲ್ಲಿ ವೃದ್ಧನ ಶವ ತರಲು ಹೋದ ಮೂವರ ಪ್ರಾಣವನ್ನೂ ಹೊತ್ತೊಯ್ದ ಜವರಾಯ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿಬ್ಬಂದಿ ಮೇಲೆ ಉದ್ಯಮಿ ಹಾರಿಸಿದ ಗುಂಡು ಗುರಿ ತಪ್ಪಿ ಮಗನ ಪ್ರಾಣವನ್ನೇ ತೆಗೆಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts