ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ನಾಮಫಲಕ ತೋರಿ ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದ 19 ಸದಸ್ಯರನ್ನು ಒಂದು ವಾರ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ.
ನಾಲ್ವರು ಕಾಂಗ್ರೆಸ್ ಸಂಸದರೂ ಸೇರಿ 19 ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದು, ಈ ಎಲ್ಲಾ ಸದಸ್ಯರು ಅಧಿವೇಶನದ ವೇಳೆ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶಿಸಿ ಸದನಕ್ಕೆ ಅಡ್ಡಿಪಡಿಸಿದ್ದರು. ಹಣದುಬ್ಬರ,ಜಿಎಸ್ಟಿ ಬೆಲೆ ಏರಿಕೆ ಮತ್ತು ಕಾಂಗ್ರೆಸ್ ಸಂಸದರ ಅಮಾನತು ಸೇರಿದಂತೆ ಇತರೆ ವಿಷಯಗಳ ಕುರಿತು ಸದಸ್ಯರು ಪ್ಲೇ ಕಾರ್ಟ್ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.
ಟಿಎಂಸಿ ಸಂಸದರಾದ ಸುಶ್ವಿತಾ ದೇವ್, ಡಾ.ಸಂತಾನು ಸೇನ್ ಮತ್ತು ಡೋಲಾ ಸೇನ್ ಇನ್ನುಳಿದ ಶಂತನು ಸೇನ್,ಮೌಸಂ ನೂರ್, ನದಿಮುಲ್ ಹಖ್, ಅಬೀರ್ ರಂಜನ್ ಬಿಸ್ವಾಸ್, ಡಿಎಂಕೆಯ ಕನಿಮೋಳಿ, ಎಂ. ಮೊಹಮ್ಮದ್ ಅಬ್ದುಲ್ಲ, ಸಿಪಿಐ (ಎಂ)ನ ಎಎ ರಹೀಂ ಅವರನ್ನು ಅಮಾನತು ಮಾಡಲಾಗಿದೆ.
ಸೋಮವಾರ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರಾದ ಮಾಣಿಕ್ಯಂ ಟ್ಯಾಗೋರ್, ಟಿಎನ್ ಪ್ರತಾಪನ್, ಜೋತಿಮಣಿ ಮತ್ತು ರಮ್ಯಾ ಹರಿದಾಸ್ ಅವರನ್ನು ಲೋಕಸಭೆಯ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು. (ಏಜೆನ್ಸೀಸ್)
ಸಿನಿಮಾಗಳು ನಷ್ಟವಾಗುವುದು ನನಗೆ ಇಷ್ಟವಿಲ್ಲ, ದಕ್ಷಿಣದ ಸಿನಿಮಾಗಳೇ ಬೆಸ್ಟ್ ಎಂದ ಸಲ್ಲು!