More

    ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುವೆ, ಜನಾದೇಶ ಗೆದ್ದವರಿಗೆ ಶುಭಾಶಯಗಳು: ರಾಹುಲ್​ ಗಾಂಧಿ

    ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶ ಗೆದ್ದವರಿಗೆ ಶುಭಾಶಯಗಳು. ಈ ಚುನಾವಣಾ ಫಲಿತಾಂಶದಿಂದ ನಾವು ಸಾಕಷ್ಟು ವಿಚಾರ ಕಲಿತ್ತಿದ್ದೇವೆ ಎಂದಿದ್ದಾರೆ.

    ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಶ್ರಮ ಹಾಗೂ ಸಮರ್ಪಣೆಗೆ ನನ್ನ ಕೃತಜ್ಞತೆಗಳು. ಈ ಫಲಿತಾಂಶದಿಂದ ನಾವು ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

    ಉತ್ತರಪ್ರದೇಶ, ಪಂಜಾಬ್​, ಗೋವಾ. ಉತ್ತರಾಖಂಡ್​, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ಎರಡಂಕಿ ದಾಟಿಲ್ಲ. ಈ ರಾಜ್ಯದಲ್ಲಿ ಎಎಪಿ ಬಹುಮತ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಅತ್ತ ಗೋವಾದಲ್ಲಿ ಕಾಂಗ್ರೆಸ್​ ಅನ್ನು ಹಿಂದಿಕ್ಕಿರುವ ಬಿಜೆಪಿಗೆ ಮ್ಯಾಜಿಕ್​ ನಂಬರ್​ ದಾಟಲು ಇನ್ನು 3 ಸ್ಥಾನದ ಅಗತ್ಯವಿದೆಯಷ್ಟೆ. ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್​ನಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ.

    ಉತ್ತರ ಪ್ರದೇಶಲ್ಲಿ ಫಲಿಸಲಿಲ್ಲ ಪ್ರಿಯಾಂಕಾ ಗಾಂಧಿ ತಂತ್ರಗಾರಿಕೆ, ಯೋಗಿ ಹವಾ ಮುಂದೆ ನೆಲಕ್ಕಚ್ಚಿದ ಕಾಂಗ್ರೆಸ್​

    ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

    ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

    ಪರಸ್ತ್ರೀ ಜತೆ ಗಂಡನ ಲವ್ವಿಡವ್ವಿ, ಪತ್ನಿಗೂ ಇತ್ತು ಅಕ್ರಮ ಸಂಬಂಧ… ಆ ರಾತ್ರಿ ನಡೆದೇ ಹೋಯ್ತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts