ತುಮಕೂರು: ಗುಬ್ಬಿ ತಾಲೂಕು ಚೇಳೂರು ಠಾಣೆಯ ಮಹಿಳಾ ಪಿಎಸ್ಐ ವಿಜಯಕುಮಾರಿ ಯುವಕನೊಬ್ಬನಿಗೆ ಥಳಿಸಿ ಸೊಂಟದ ಮೂಳೆ ಮುರಿದಿದ್ದಾರೆ!
ಕೋಡಿಯಾಲದ ಮಣಿಕಂಠ ಮೂಳೆ ಮುರಿತಕ್ಕೊಳಗಾದವ. ಕೋಡಿಯಾಲದ ಬೀದಿಯಲ್ಲಿರುವ ನೀರಿನ ಪೈಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಕಂಠನ ತಂದೆ ಮುನಿಯಪ್ಪ ಹಾಗೂ ಪಕ್ಕದ ಮನೆಯ ಯಲ್ಲಮ್ಮ, ಶಿವಮೂರ್ತಿ ಎಂಬುವರ ನಡುವೆ ಜಗಳ ಆಗಿತ್ತು. ಈ ಬಗ್ಗೆ ಯಲ್ಲಮ್ಮ ಮತ್ತು ಶಿವಮೂರ್ತಿ ಚೇಳೂರು ಠಾಣೆಯಲ್ಲಿ ಮಣಿಕಂಠನ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಗಾಗಿ ಮಣಿಕಂಠನನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಪಿಎಸ್ಐ ವಿಜಯಕುಮಾರಿ, ಆತನನ್ನು ಮನಬಂದಂತೆ ಥಳಿಸಿದ್ದರು. ಇದರಿಂದ ಆತನ ಸೊಂಟದ ಮೂಳೆ ಮುರಿದಿದೆ. ಮೂರು ದಿನ ಊಟ ಮತ್ತು ನೀರು ಕೊಡದೆ ಠಾಣೆಯಲ್ಲಿ ಕೂಡಿ ಹಾಕಿದ್ದರು ಎಂದು ಮಣಿಕಂಠನ ಪಾಲಕರು ಆರೋಪಿಸಿದ್ದಾರೆ.
ಮಣಿಕಂಠ 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾನೆ. ಈ ಬಗ್ಗೆ ದೂರು ನೀಡಿದರೆ, ಜಗಳ ಪ್ರಕರಣದಲ್ಲಿ ಜಾಮೀನು ಸಿಗದಂತೆ ಮಾಡುವುದಾಗಿ ವಿಜಯಕುಮಾರಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ, ದೂರು ನೀಡಲು ತಡವಾಗಿದ್ದಾಗಿ ಮಣಿಕಂಠ ಹೇಳಿದ್ದಾನೆ.
ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!
ವಿಜಯಪುರದಲ್ಲಿ ಹಾಡಹಗಲೇ ಪಿಎಸ್ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್