ಬೆಂಗಳೂರು: ಇಂದು ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಹೆಚ್ಚಿನ ನಿರೀಕ್ಷೆ ಇದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಆಯ್ಕೆ ಆಗಿ ಹೋದವರು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಬಜೆಡ್ ಮಂಡನೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕೆಲ ನಿರ್ಧಾರ ಆಗುತ್ತೆ. ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ರಾಜ್ಯದ ಮಟ್ಟಿಗೆ ಈಗಾಗಲೇ ಸಬರ್ಬಲ್ ಲೈಲ್ವೆ ಅಪ್ರೂವಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹೊಸ ಯೋಜನೆ, ಉದ್ಯೋಗ ಸೃಷ್ಟಿ… ಇನ್ನೂಂದು ಗಂಟೆಗೆ ಎಲ್ಲ ಗೊತ್ತಾಗುತ್ತೆ ಎಂದರು. ಕೋವಿಡ್ ನೆರಳಲ್ಲಿ 3ನೇ ಬಜೆಟ್ ಎಕಾನಮಿ ಪಿಕ್ ಅಪ್ ಆಗುವ ಲಕ್ಷಣ ಕಾಣ್ತಿದೆ. ಒಳ್ಳೆಯ ಮುನ್ಸೂಚನೆ ಇರುವ ಬಜೆಟ್ ಆಗುತ್ತೆ ಎಂದು ಆಶಾದಾಯಕ ವ್ಯಕ್ತಪಡಿಸಿದರು.