More

    ಬಿಜೆಪಿಯವರಿಂದ ಬೆದರಿಕೆ ಇದೆ, ನಮ್ಮ ನಾಯಕರಿಗೆ ಭದ್ರತೆ ಒದಗಿಸಿ: ಪ್ರಕಾಶ್ ರಾಥೋಡ್

    ಬೆಂಗಳೂರು: ನಮ್ಮ ನಾಯಕರಾದ ಹರಿಪ್ರಸಾದ್ ಅವರಿಗೆ ಬಿಜೆಪಿಯವರು ಬೆದರಿಕೆ ಹಾಕುವ ಮೂಲ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದ್ದಾರೆ. ಸದನದ ಒಳಗೂ ಕೂಡ ಇದೇ ರೀತಿಯ ವರ್ತನೆ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇದ್ಯಾವುದಕ್ಕೂ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಸಚೇತಕ ಪ್ರಕಾಶ್ ರಾಥೋಡ್​ ಹೇಳಿದರು.

    ರಾಷ್ಟ್ರದ್ರೋಹ ಹೇಳಿಕೆ ಕೊಟ್ಟ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಸೋಮವಾರದವರೆಗೂ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಕೊಡುವವರೆಗೂ ಹಗಲಿರುಳು ಧರಣಿ ಮುಂದುವರಿಯಲಿದೆ ಎಂದ ರಾಥೋಡ್​, ಹರಿಪ್ರಸಾದ್ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅವರಿಗೆ ರಕ್ಷಣೆ ಕೊಡಬೇಕೆಂದು ಸಭಾಪತಿಗೆ ಮನವಿ ಮಾಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

    ಬೆದರಿಕೆಗೆ ಜಗ್ಗಲ್ಲವೆಂದ ಹರಿಪ್ರಸಾದ್: ಪ್ರತಿಪಕ್ಷ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡದ ಸಾಮರ್ಥ್ಯ ಇಲ್ಲದವರು ವೈಯಕ್ತಿಕ ಆರೋಪ, ಬೆದರಿಕೆ ದಾರಿ ಹಿಡಿಯುತ್ತಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗುಡುಗಿದರು.

    ಈ ಹಿಂದೆಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ ಅವರ ವಿರುದ್ಧವೂ ಇದೇ ರೀತಿಯ ಪ್ರಚೋದನಾಕಾರಿ ಕರೆ ಕೊಟ್ಟಿದ್ದರು. ಅದರಿಂದ ಏನೇನು ಅನಾಹುತವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಧರಣಿ: ವಿಧಾನ ಪರಿಷತ್​ ಕಲಾಪ ಸೋಮವಾರಕ್ಕೆ ಮುಂದೂಡಿಕೆ

    ಮೇಕೆದಾಟು ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್​ ಸಜ್ಜು: ಫೆ.27ರಂದು ರಾಮನಗರದಿಂದ ಹೊರಡಲಿದೆ ಯಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts