ಮೇಕೆದಾಟು ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್​ ಸಜ್ಜು: ಫೆ.27ರಂದು ರಾಮನಗರದಿಂದ ಹೊರಡಲಿದೆ ಯಾತ್ರೆ

ಬೆಂಗಳೂರು: ಅರ್ಧಕ್ಕೆ ನಿಲ್ಲಿಸಲಾಗಿದ್ದ ಮೇಕೆದಾಟು ಪಾದಯಾತ್ರೆಯನ್ನ ಮತ್ತೆ ಆರಂಭಿಸಲು ಕಾಂಗ್ರೆಸ್​ ಸಿದ್ಧತೆ ನಡೆಸಿದ್ದು, ಫೆ.27ರಿಂದ ಮೇಕೆದಾಟು ಹೋರಾಟ ಶುರುವಾಗಲಿದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ 2022ರ ಜನವರಿ 9ರಂದು ಕನಕಪುರದ ಸಂಗಮದಿಂದ ಆರಂಭವಾಗಿತ್ತು. 4 ದಿನದ ಪಾದಯಾತ್ರೆ ರಾಮನಗರದವರೆಗೆ ತಲುಪಿತ್ತು. ಕರೊನಾ ಪ್ರಕರಣ ಹೆಚ್ಚಾಗಿದ್ದರಿಂದ 5ನೇ ದಿನಕ್ಕೆ ಪಾದಯಾತ್ರೆಯು ಮೊಟಕುಗೊಂಡಿತ್ತು. ಇದೀಗ ಪುನಃ ಯಾತ್ರೆ ಆರಂಭಿಸಲು ಉದ್ದೇಶಿಸಿದ್ದು, ರಾಮನಗರದಿಂದ ಬಿಡದಿ, ಕೆಂಗೇರಿ ಮಾರ್ಗವಾಗಿ ಮಲ್ಲೇಶ್ವರ ಒಳಗೊಂಡಂತೆ ಮಾರ್ಗವನ್ನು ಅಂತಿಮಗೊಳಿಸಲಾಗುತ್ತಿದೆ. ಈ ಕುರಿತು ಗುರುವಾರ … Continue reading ಮೇಕೆದಾಟು ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್​ ಸಜ್ಜು: ಫೆ.27ರಂದು ರಾಮನಗರದಿಂದ ಹೊರಡಲಿದೆ ಯಾತ್ರೆ