ಬೆಂಗಳೂರು: ನ.28ರಂದು ‘ಅಪ್ಪುಗಾಗಿ ಬೈಕ್ ರೈಡ್’ ಹೆಸರಿನಲ್ಲಿ ಫ್ರೀಡಂ ಪಾರ್ಕ್ನಿಂದ ಅಪ್ಪು ಸಮಾಧಿವರೆಗೂ ಬೈಕ್ ರೈಡ್ ನಡೆಯಲಿದೆ.
ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೈಕ್ ರೈಡ್ನಲ್ಲಿ ಯಾರು ಬೇಕಿದ್ರೂ ಭಾಗವಹಿಸಬಹುದು ಎಂದು ಕಾರ್ಯಕ್ರಮ ಆಯೋಜಕರಾದ ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ತಿಳಿಸಿದೆ. ಬೈಕ್ ರೈಡ್ಗೆ ರಿಜಿಸ್ಟರ್ ಆಗುವ ಪ್ರತಿಯೊಬ್ಬರಿಗೂ ಟೀ-ಶರ್ಟ್, ಬ್ಯಾಡ್ಜ್, ಸರ್ಟಿಫಿಕೇಟ್, ಉಪಹಾರದ ವ್ಯವಸ್ಥೆ ಇರಲಿದೆ. ಪ್ರತಿಯೊಬ್ಬರೂ ಬೈಕ್ ರೈಡ್ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಸೂಚನೆ ನೀಡಿದೆ.
ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದ್ದರೂ ನಿತ್ಯ ನೆನಪಿನಲ್ಲೇ ಇರುತ್ತಾರೆ. ಅಪ್ಪು ಅವರ ನಿತ್ಯ ಚಲನವನಗಳನ್ನು ಗಮನಿಸಿ, ಅವರ ನೆನಪಿಗಾಗಿ ನಮ್ಮ ದಿಚಕ್ರ ಸಂಸ್ಥೆ ಹಾಗೂ ಇಂಚರ ಸ್ಟುಡಿಯೋ ವತಿಯಿಂದ ”ರೈಡ್ ಫಾರ್ ಅಪ್ಪು- ಯುವರತ್ಮನಿಗೆ ಅರ್ಪಣೆ” ನಾಮಾಂಕಿತದಲ್ಲಿ ಸ್ವಾತಂತ್ರ್ಯ ಉದ್ಯಾನವನದಿಂದ ಅಪ್ಪು ಅವರ ಸಮಾಧಿವರೆಗೆ ಬೈಕ್ ರೈಡ್ ಅನ್ನು ನ.28ರಂದು ಹಮ್ಮಿಕೊಳ್ಳಲಾಗಿದೆ. ಅಪ್ಪು ಅವರ ಯುವ ಅಭಿಮಾನಿಗಳು ಈ ಮೆರವಣಿಗೆಯಲ್ಲಿ ತಮ್ಮ ಬೈಕ್ನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಪ್ಪು ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ತಮ್ಮಲ್ಲಿ ವಿನಂತಿ ಎಂದು ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ಮನವಿ ಮಾಡಿದೆ.
ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್- ಪುನೀತ್ ಜೀವನ ಚರಿತ್ರೆ
https://www.vijayavani.net/a-kodimath-shree-about-rain/
ಮಿದುಳು ಜ್ವರಕ್ಕೆ 10 ವರ್ಷದ ಬಾಲಕ ಬಲಿ! ಮಗನ ಅಗಲಿಕೆ ನೋವು ಸಹಿಸಲಾಗದೆ ದುರಂತ ಅಂತ್ಯಕಂಡ ದಂಪತಿ
ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ ರೂ. ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು