ಬೆಂಗಳೂರು: ಮುಂಬರುವ ಗಣರಾಜ್ಯೋತ್ಸವದಲ್ಲಿ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಲಾಲ್ಬಾಗ್ನ ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಪ್ರೀತಿಯ ‘ಅಪ್ಪು’ ಅವರನ್ನ ಕಣ್ತುಂಬಿಕೊಳ್ಳಬಹುದು. ಕರುನಾಡಿನ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಾಗಿ ಮೆರೆದ ಅಪ್ಪು ಅವರ ಅಗಲಿಕೆ ನೋವು ಕಾಡತ್ತಲೇ ಇದೆ. ನೋವಿನಲ್ಲಿ ಇರುವ ಅಭಿಮಾನಿಗಳು ವಿಧದ ಜಾತಿಯ- ಬಣ್ಣಬಣ್ಣದ ಹೂವಿನಲ್ಲಿ ಅರಳುವ ಅಪ್ಪು ಅವರನ್ನ ಕಣ್ತುಂಬಿಕೊಂಡು ನಮಿಸಿಲು ಸಿದ್ಧರಾಗಿ.
ಹೌದು, 2022ರ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಡಾ.ರಾಜ್ಕುಮಾರ್ ಅವರ ಜೀವನ ಚರಿತ್ರೆಯನ್ನ ಫಲಪುಷ್ಪಗಳಿಂದ ಅನಾವರಣ ಮಾಡಲಾಗುತ್ತೆ. ಆ ಮೂಲಕ ಇಬ್ಬರಿಗೂ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಈ ಕುರಿತು ತೋಟಗಾರಿಕೆ ಇಲಾಖೆ ತೀರ್ಮಾನ ತೆಗೆದುಕೊಂಡಿದ್ದು, ಮೈಸೂರು ಉದ್ಯಾನಕಲಾ ಸಂಘಟ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಪುನೀತ್ ಅಗಲಿಕೆ ನೋವ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದೀಗ ಹೂವಿನಲ್ಲಿ ಕಂಗೊಳಿಸುವ ಅಪ್ಪು ಮತ್ತು ಡಾ.ರಾಜ್ಕುಮಾರ್ ಅವರ ಜೀವನ ಚರಿತ್ರೆಯನ್ನ ಕಣ್ತುಂಬಿಕೊಳ್ಳಲು ಡಾ.ರಾಜ್ ಕುಟುಂಬದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ
ಇಷ್ಟಕ್ಕೆ ನಿಲ್ಲಲ್ಲ, ಇನ್ನೂ ಇದೆ ಮಳೆ ಕಾಟ.. ಏನು ಮಾಡೋಕೂ ಆಗಲ್ಲ: ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ ರೂ. ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು