More

    ಕೆಎಸ್ಸಾರ್ಟಿಸಿ ಬಸ್​ಗಳ ಮೇಲೆ ಮರಾಠಿ ಲಿಪಿ ಬರೆದ ‘ಮಹಾ’ ಪುಂಡರು! ಘೋಷಣೆ ಕೂಗುವಂತೆ ಚಾಲಕನಿಗೆ ಧಮ್ಕಿ

    ರಾಯಚೂರು: ಮಹಾರಾಷ್ಟ್ರದ ತೆರಳಿದ್ದ ಕರ್ನಾಟಕ ಸಾರಿಗೆ ಬಸ್​ಗಳ ಮೇಲೆ ಕಪ್ಪು ಮತ್ತು ಕೇಸರಿ ಬಣ್ಣದಲ್ಲಿ ಶಿವಸೇನಾ ಧ್ವಜ ಚಿತ್ರಿಸಿ, ಜೈ ಮಹಾರಾಷ್ಟ್ರ, ಜೈ ಶಿವಸೇನಾ, ಕನ್ನಡ ನಿಷೇಧ, ಜೈ ಶಿವಾಜಿ, ಜೈ ಭವಾನಿ ಎಂದು ಬರೆದು ಉದ್ಧಟತನ ತೋರಿದ್ದಾರೆ. ಬಸ್​ಗಳ ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ

    ಪುಣೆಯ ಸ್ವಾರ್ಗೆಟ್​ನಲ್ಲಿ ಭಾನುವಾರ ಮಧ್ಯರಾತ್ರಿ ಕಲಬುರಗಿಗೆ ಹೊರಟಿದ್ದ ಕರ್ನಾಟಕ ಸಾರಿಗೆ ಬಸ್ ತಡೆದು ಚಾಲಕನಿಗೆ ಧಮ್ಕಿ ಹಾಕಿದ ಪುಂಡರು, ಚಾಲಕನ ಕೈಯಲ್ಲಿ ಒತ್ತಾಯ ಪೂರ್ವಕವಾಗಿ ಶಿವಸೇನಾ ಧ್ವಜ ಇಟ್ಟು, ಘೋಷಣೆ ಕೂಗುವಂತೆ ಧಮಕಿ ಹಾಕಿದ್ದಾರೆ.

    ಕೆಎಸ್ಸಾರ್ಟಿಸಿ ಬಸ್​ಗಳ ಮೇಲೆ ಮರಾಠಿ ಲಿಪಿ ಬರೆದ 'ಮಹಾ' ಪುಂಡರು! ಘೋಷಣೆ ಕೂಗುವಂತೆ ಚಾಲಕನಿಗೆ ಧಮ್ಕಿ

    ಇನ್ನು ಪುಣೆಗೆ ಹೋಗಿದ್ದ ಲಿಂಗಸುಗೂರು ಡಿಪೋದ ಸಾರಿಗೆ ಬಸ್​ನ ಮೇಲೆ ಶಿವಸೇನೆ-ಎಂಇಎಸ್​ ಕಾರ್ಯಕರ್ತರು ಶಿವಸೇನಾ ಧ್ವಜ ಚಿತ್ರಿಸಿ, ಜೈ ಮಹಾರಾಷ್ಟ್ರ, ಶಿವಸೇನಾ, ಕನ್ನಡ ನಿಷೇಧ ಎಂದು ಮರಾಠಿ ಲಿಪಿಯಲ್ಲಿ ಬರೆದು ಉದ್ಧಟತನ ಮೆರೆದಿದ್ದಾರೆ. ಈಶಾನ್ಯ ಕರ್ನಾಟಕ ಸಾರಿಗೆ ಟಕದ ಲಿಂಗಸುಗೂರು ಮತ್ತು ಪೂನಾ ಸಾರಿಗೆ ಬಸ್​ ಶುಕ್ರವಾರ ಮಧ್ಯಾಹ್ನ 2.30ಕ್ಕೆ ತೆರಳಿ, ಪೂನಾದ ಸ್ವಾರ್ಗೇಟ್​ ಪ್ರದೇಶದ ಪಾರ್ಕಿಂಗ್​ ಸ್ಥಳದಲ್ಲಿ ನಿಂತಿತ್ತು. ಶನಿವಾರ ಮಧ್ಯಾಹ್ನ ಪುಂಡರ ಗುಂಪೊಂದು ಸಾರಿಗೆ ಬಸ್​ ಮೇಲೆ ಬರೆಯಲು ಮುಂದಾದಾಗ, ಚಾಲಕ, ನಿರ್ವಾಹಕರು ವಿರೋಧಿಸಿದ್ದಾರೆ. ಆದರೂ ಬಸ್​ನ ಮುಂಭಾಗ ಮತ್ತು ಹಿಂಭಾಗದ ಗಾಜುಗಳ ಮೇಲೆ ಮತ್ತು ಎರಡೂ ಬದಿ ಜೈ ಮಹಾರಾಷ್ಟ್ರ, ಶಿವಸೇನಾ, ಕನ್ನಡ ನಿಷೇಧ ಎಂದು ಮರಾಠಿ ಲಿಪಿಯಲ್ಲಿ ಬರೆದಿದ್ದಾರೆ. ಇದರಿಂದ ಸಂಜೆ 4 ಗಂಟೆಗೆ ಪೂನಾ ಬಿಡಬೇಕಿದ್ದ ಬಸ್​ 7 ಗಂಟೆಗೆ ಬಿಟ್ಟು, ಭಾನುವಾರ ಮೂರು ತಾಸು ತಡವಾಗಿ ಪಟ್ಟಣಕ್ಕೆ ವಾಪಸಾಗಿದೆ.

    ಶಶಿಕಲಾ ಜೊಲ್ಲೆ ಆಸ್ತಿ ಮೇಲೆ ಶಿವಸೇನೆ ದಾಳಿ: ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ತಡೆದು ಪುಂಡಾಟ

    ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts