ರಾಯಚೂರು: ಮಹಾರಾಷ್ಟ್ರದ ತೆರಳಿದ್ದ ಕರ್ನಾಟಕ ಸಾರಿಗೆ ಬಸ್ಗಳ ಮೇಲೆ ಕಪ್ಪು ಮತ್ತು ಕೇಸರಿ ಬಣ್ಣದಲ್ಲಿ ಶಿವಸೇನಾ ಧ್ವಜ ಚಿತ್ರಿಸಿ, ಜೈ ಮಹಾರಾಷ್ಟ್ರ, ಜೈ ಶಿವಸೇನಾ, ಕನ್ನಡ ನಿಷೇಧ, ಜೈ ಶಿವಾಜಿ, ಜೈ ಭವಾನಿ ಎಂದು ಬರೆದು ಉದ್ಧಟತನ ತೋರಿದ್ದಾರೆ. ಬಸ್ಗಳ ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ
ಪುಣೆಯ ಸ್ವಾರ್ಗೆಟ್ನಲ್ಲಿ ಭಾನುವಾರ ಮಧ್ಯರಾತ್ರಿ ಕಲಬುರಗಿಗೆ ಹೊರಟಿದ್ದ ಕರ್ನಾಟಕ ಸಾರಿಗೆ ಬಸ್ ತಡೆದು ಚಾಲಕನಿಗೆ ಧಮ್ಕಿ ಹಾಕಿದ ಪುಂಡರು, ಚಾಲಕನ ಕೈಯಲ್ಲಿ ಒತ್ತಾಯ ಪೂರ್ವಕವಾಗಿ ಶಿವಸೇನಾ ಧ್ವಜ ಇಟ್ಟು, ಘೋಷಣೆ ಕೂಗುವಂತೆ ಧಮಕಿ ಹಾಕಿದ್ದಾರೆ.
ಇನ್ನು ಪುಣೆಗೆ ಹೋಗಿದ್ದ ಲಿಂಗಸುಗೂರು ಡಿಪೋದ ಸಾರಿಗೆ ಬಸ್ನ ಮೇಲೆ ಶಿವಸೇನೆ-ಎಂಇಎಸ್ ಕಾರ್ಯಕರ್ತರು ಶಿವಸೇನಾ ಧ್ವಜ ಚಿತ್ರಿಸಿ, ಜೈ ಮಹಾರಾಷ್ಟ್ರ, ಶಿವಸೇನಾ, ಕನ್ನಡ ನಿಷೇಧ ಎಂದು ಮರಾಠಿ ಲಿಪಿಯಲ್ಲಿ ಬರೆದು ಉದ್ಧಟತನ ಮೆರೆದಿದ್ದಾರೆ. ಈಶಾನ್ಯ ಕರ್ನಾಟಕ ಸಾರಿಗೆ ಟಕದ ಲಿಂಗಸುಗೂರು ಮತ್ತು ಪೂನಾ ಸಾರಿಗೆ ಬಸ್ ಶುಕ್ರವಾರ ಮಧ್ಯಾಹ್ನ 2.30ಕ್ಕೆ ತೆರಳಿ, ಪೂನಾದ ಸ್ವಾರ್ಗೇಟ್ ಪ್ರದೇಶದ ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು. ಶನಿವಾರ ಮಧ್ಯಾಹ್ನ ಪುಂಡರ ಗುಂಪೊಂದು ಸಾರಿಗೆ ಬಸ್ ಮೇಲೆ ಬರೆಯಲು ಮುಂದಾದಾಗ, ಚಾಲಕ, ನಿರ್ವಾಹಕರು ವಿರೋಧಿಸಿದ್ದಾರೆ. ಆದರೂ ಬಸ್ನ ಮುಂಭಾಗ ಮತ್ತು ಹಿಂಭಾಗದ ಗಾಜುಗಳ ಮೇಲೆ ಮತ್ತು ಎರಡೂ ಬದಿ ಜೈ ಮಹಾರಾಷ್ಟ್ರ, ಶಿವಸೇನಾ, ಕನ್ನಡ ನಿಷೇಧ ಎಂದು ಮರಾಠಿ ಲಿಪಿಯಲ್ಲಿ ಬರೆದಿದ್ದಾರೆ. ಇದರಿಂದ ಸಂಜೆ 4 ಗಂಟೆಗೆ ಪೂನಾ ಬಿಡಬೇಕಿದ್ದ ಬಸ್ 7 ಗಂಟೆಗೆ ಬಿಟ್ಟು, ಭಾನುವಾರ ಮೂರು ತಾಸು ತಡವಾಗಿ ಪಟ್ಟಣಕ್ಕೆ ವಾಪಸಾಗಿದೆ.
ಶಶಿಕಲಾ ಜೊಲ್ಲೆ ಆಸ್ತಿ ಮೇಲೆ ಶಿವಸೇನೆ ದಾಳಿ: ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ತಡೆದು ಪುಂಡಾಟ
ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!