More

    ಮನೆ ಅಂಗಳದಲ್ಲೇ ಅಪ್ಪು ಪುತ್ಥಳಿ ನಿರ್ಮಿಸಿಕೊಂಡ ಅಭಿಮಾನಿ! ಭಾವುಕರಾದ ಗ್ರಾಮಸ್ಥರು

    ವಿಜಯಪುರ: ಅಭಿಮಾನಿಯೊಬ್ಬರು ತನ್ನ ಮನೆಯಂಗಳದಲ್ಲೇ ನಟ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ನಿರ್ಮಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

    ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿಯ ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ.ನಾಗರಾಜ್ ಹಾಗೂ ಮಲ್ಲಮ್ಮ ದಂಪತಿ ಇಬ್ಬರೂ ಪುನೀತ್​ರ ಕಟ್ಟಾ ಅಭಿಮಾನಿಗಳು. ಅಪ್ಪು ಮೇಲಿನ ಅಭಿಮಾನಕ್ಕೆ ತಮ್ಮ ಮನೆಯಂಗಳದಲ್ಲೇ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ. ಇದನ್ನು ಕಂದ ಗ್ರಾಮಸ್ಥರು ಅಪ್ಪು ನೆನೆದು ಮತ್ತಷ್ಟು ಭಾವುಕರಾದರು.

    ಪುನೀತ್ ರಾಜ್​ಕುಮಾರ್​ರ ಪುತ್ಥಳಿಯನ್ನು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ್ ಬಾಬು, ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕ ನೇತೃತ್ವದಲ್ಲಿ ಅನಾವರಣ ಮಾಡಲಾಗಿದೆ.

    ಮನೆ ಅಂಗಳದಲ್ಲೇ ಅಪ್ಪು ಪುತ್ಥಳಿ ನಿರ್ಮಿಸಿಕೊಂಡ ಅಭಿಮಾನಿ! ಭಾವುಕರಾದ ಗ್ರಾಮಸ್ಥರು

    ಕೋಟ್ಯಂತರ ಕನ್ನಡಿಗರ ಮನೆದಲ್ಲಿ ರಾಜಕುಮಾರನಂತೆ ಮೆರೆದ ಪ್ರೀತಿಯ ಅಪ್ಪು ನಮ್ಮೊಂದಿಗೆ ಇಲ್ಲವಾದರು ಅವರ ನೆನಪು ಮಾತ್ರ ಎಂದಿಗೂ ಅಜರಾಮರ. ಪುನೀತ್​ ನೆನಪಲ್ಲಿ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಮಾನ ಮೆರೆಯುತ್ತಲೇ ಇದ್ದಾರೆ.

    ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

    ಸಾವಿನಲ್ಲೂ ಸಾರ್ಥಕತೆ ಮೆರೆದ ಎರಡೂವರೆ ವರ್ಷದ ಬಾಲಕಿ: ಈ ಕರುಣಾಜನಕ ಕಥೆ ಕೇಳಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts