ಬೆಂಗಳೂರು: ಹೊಸೂರು ರಸ್ತೆ ಜಂಕ್ಷನ್ನಲ್ಲಿ ಡಿ.27ರಂದು ನಡೆದಿದ್ದ ಅರ್ಚನಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ರಹಸ್ಯ ಬಯಲಾಗಿದೆ. ಮೊದಲು ಕೊಲೆಗೆ ಸಂಚು ರೂಪಿಸಿದ್ದೇ ಅರ್ಚನಾ ಮಗಳು ಯುವಿಕಾ. ಅರ್ಚನಾಳ 3ನೇ ಗಂಡನ ನವೀನ್ ಜತೆ ಮಗಳು ಯುವಿಕಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಷ್ಯವನ್ನೂ ಬಚ್ಚಿಟ್ಟು ನವೀನ್ ತನ್ನ ಸ್ನೇಹಿತರ ಬಳಿ ಬೇರೆಯೇ ಕಥೆ ಕಟ್ಟಿದ್ದ. ಬರೋಬ್ಬರಿ ಒಂದೂವರೆ ತಿಂಗಳ ಕಾಲ ಹತ್ಯೆಗೆ ಸ್ಕೆಚ್ ನಡೆದಿತ್ತು… ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕೌಟುಂಬಿಕ ಕಲಹದಿಂದ ಮೊದಲ ಪತಿಯಿಂದ ವಿಚ್ಛೇಧನ ಪಡೆದ ಅರ್ಚನಾ, ಇಬ್ಬರು ಮಕ್ಕಳ ಜತೆ ಪ್ರತ್ಯೇಕ ಆಗಿದ್ದರು. ಬಳಿಕ ಸಿದ್ದಿಕ್ ಎಂಬಾತನ ಜತೆ ನೆಲೆಸಿದ್ದಳು. ಆತನೊಂದಿಗೂ ಕಿರಿಕ್ ಆಗಿ ದೂರವಾಗಿದ್ದಳು. 2014ರಲ್ಲಿ ಅರ್ಚನಾಗೆ ಬೇಗೂರು ನಿವಾಸಿ ನವೀನ್ ಎಂಬಾತನ ಪರಿಚಯ ಆಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಪ್ರಾಪರ್ಟಿ ಲಿಟೆಗೇಷನ್ ವಿಚಾರದಲ್ಲಿ ಅರ್ಚನಾಗೆ ನವೀನ್ ಸಹಾಯ ಮಾಡುತ್ತಿದ್ದ. ನವೀನ್ ಜಿಮ್ ಟ್ರೈನರ್ ಆಗಿದ್ದ. ಇವರಿಬ್ಬರ ನಡುವಿನ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿತ್ತು. 2017ರಲ್ಲಿ ಅರ್ಚನಾಳನ್ನ ನವೀನ್ ವಿವಾಹವಾಗಿದ್ದ. 2019ರಲ್ಲಿ ಇಬ್ಬರ ನಡುವೆ ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿತ್ತು. ಆಗ ಅರ್ಚನಾಳ ಮಗಳು ಯುವಿಕಾ ರೆಡ್ಡಿ ಜತೆ ನವೀನ್ ಸಲುಗೆ ಬೆಳೆಸಿಕೊಂಡಿದ್ದ. ಮಗಳು ಯುವಿಕಾ ರೆಡ್ಡಿಗೂ ನವೀನ್ ನಡುವೆ ಅಕ್ರಮ ಸಂಬಂಧ ಇದೆ ಎಂಬುದು 2021ರಲ್ಲಿ ಅರ್ಚನಾಗೆ ಗೊತ್ತಾಗಿತ್ತು. ಈ ವಿಚಾರಕ್ಕೆ ನವೀನ್ ಮತ್ತು ಯುವಿಕಾಗೆ ಅರ್ಚನಾ ವಾರ್ನ್ ಮಾಡಿದ್ದಳು. ಇದಕ್ಕೆ ಕ್ಯಾರೆ ಎನ್ನದೆ ಇಬ್ಬರ ನಡುವಿನ ಸಂಬಂಧ ಕಂಟಿನ್ಯೂ ಆಗಿತ್ತು. ಇದೇ ವಿಚಾರಕ್ಕೆ ಜಗಳವಾಗಿ ನವೀನ್ ಮತ್ತು ಯುವಿಕಾಳನ್ನು ಅರ್ಚನಾ ಮನೆಯಿಂದ ಹೊರ ಹಾಕಿದ್ದಳಂತೆ. ನಂತರ ಇವರಿಬ್ಬರೂ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು.
ಈ ವಿಚಾರ ತಿಳಿದು ಗರಂ ಆದ ಅರ್ಚನಾ, ಇತ್ತೀಚಿಗೆ ರೌಡಿಯೊಬ್ಬನ ಮೂಲಕ ನವೀನ್ಗೆ ಬೆದರಿಕೆ ಹಾಕಿಸಿ, ಮಗಳನ್ನು ವಾಪಸ್ ಕಳುಹಿಸುವಂತೆ ಎಚ್ಚರಿಸಿದ್ದಳು. ಆದರೂ ಆತ ಕಳಿಸಿರಲಿಲ್ಲ. ಇತ್ತ ಐಷಾರಾಮಿ ಜೀವನಕ್ಕೆ ಅಡ್ಜೆಸ್ಟ್ ಆಗಿದ್ದ ನವೀನ್ ಮತ್ತು ಯುವಿಕಾ ರೆಡ್ಡಿಗೆ ಅರ್ಚನಾ ಹೆಸರಲ್ಲಿದ್ದ ಆಸ್ತಿ ಮೇಲೆ ಕಣ್ಣು ಬಿದ್ದಿತ್ತು. ಅಷ್ಟು ಆಸ್ತಿಗೆ ಮುಂದಿನ ವಾರಸುದಾರರು ಅರ್ಚನಾ ಮತ್ತು ಯುವಿಕಾ ಮಾತ್ರ. ಅರ್ಚನಾ ಹತ್ಯೆಯಾದ್ರೆ ಆಸ್ತಿ ಎಲ್ಲವೂ ತನ್ನ ಪಾಲಗುತ್ತೆ ಎಂದು ಮಗಳು ಯೋಚಿಸಿದ್ದಳು. ಹಾಗಾಗಿ ಮೊದಲು ಕೊಲೆಗೆ ಸಂಚು ರೂಪಿಸಿದ್ದೇ ಅರ್ಚನಾ ಮಗಳು ಯುವಿಕಾ. ಅದರಂತೆ ನವೀನ್ ತನ್ನ ಸ್ನೇಹಿತರ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ಈ ಸಂಚು ಒಂದೂವರೆ ತಿಂಗಳು ಕಾಲ ನಡೆದಿತ್ತು.
ಅತ್ತ ಅರ್ಚನಾಳ ಕೊಲೆ ಮಾಡಲು ಸ್ನೇಹಿತರಿಗೆ ನವೀನ್ ಹೇಳಿದ್ದ ಕತೆಯೇ ಬೇರೆ. ನಾನು ಅರ್ಚನಾಗೆ ಇಷ್ಟೆಲ್ಲಾ ಸಹಾಯ ಮಾಡಿದ್ದೆ. ಆದ್ರೆ ಅವಳು ನನ್ನನ್ನೇ ಮನೆಯಿಂದ ಹೊರ ಹಾಕಿದ್ಲು ಅಂತಾ ಕಣ್ಣೀರಿನ ಕತೆ ಕಟ್ಟಿದ್ದ. ಆದ್ರೆ ತನ್ನ ಸ್ನೇಹಿತರಿಗೆ ಯುವಿಕಾ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ನವೀನ್ ಹೇಳಿರಲಿಲ್ಲ. ಜಿಗಣಿಯಿಂದ ಬೇರೆ ಕಡೆ ಮನೆ ಬದಲಿಸಿದ್ದ ಅರ್ಚನಾ ರೆಡ್ಡಿ ಎಲ್ಲಿ ವಾಸವಿದ್ಲೂ ಅನ್ನೋದು ಯುವಿಕಾ ಮತ್ತು ನವೀನ್ಗೆ ತಿಳಿದಿರಲಿಲ್ಲವಂತೆ. ಅರ್ಚನಾಳ ಕಾರನ್ನು ಫಾಲೋ ಮಾಡುವಂತೆ ನವೀನ್ ತನ್ನ ಸ್ನೇಹಿತರಿಗೆ ಹೇಳಿ ಯಾವುದಾದರೊಂದು ಸಿಗ್ನಲ್ ಬಳಿಯೇ ಹತ್ಯೆ ಮಾಡುವಂತೆ ಸೂಚಿಸಿದ್ದ. ಡಿ.27ರ ರಾತ್ರಿ ಜಿಗಣಿಯಿಂದ ಹೊರಟ ಅರ್ಚನಾಳ ಕಾರು, ಮೊದಲ ಎರಡು ಸಿಗ್ನಲ್ 2 ಸೆಕೆಂಡ್ ಮಾತ್ರ ಇದ್ದಿದ್ರಿಂದ ನಿಂತಿರಲಿಲ್ಲ. ಹೊಸೂರು ರೋಡ್ ಜಂಕ್ಷನ್ ಸಿಗ್ನಲ್ನಲ್ಲಿ ಕಾರು ನಿಂತ ಕೂಡ್ಲೇ ಡಿಯೋ ಬೈಕ್ ತಂದು ಕಾರಿಗೆ ನವೀನ್ ಸ್ನೇಹಿತ ಅನೂಪ್ ಅಡ್ಡ ಮಲಗಿಸಿದ್ದ. ಅಷ್ಟೇ ಅಲ್ಲ ನೋಡನೋಡತ್ತಿದ್ದಂತೆ ಕಾರಿನ ಚಕ್ರವನ್ನ ಮಚ್ಚಿನಿಂದ ಹೊಡೆದು ಪಂಚರ್ ಮಾಡಿದ್ರು. ಆಗ ಕಾರಿನಲ್ಲಿದ್ದ ಅರ್ಚನಾಳ ಮಗ ಸೇರಿ ಇಬ್ಬರು ಹುಡುಗರು ಮತ್ತು ಡ್ರೈವರ್ ಓಡಿ ಹೋಗಿದ್ರು. ಅರ್ಚನಾಳನ್ನು ಕಾರಿನಿಂದ ಕೆಳಕ್ಕೆ ಎಳೆತಂದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. 22 ಸೆಕೆಂಡ್ನಲ್ಲಿ ಆಕೆಯ ಕಥೆಯನ್ನ ಮುಗಿಸಿಬಿಟ್ಟಿದ್ದರು.
ಈ ಕೇಸ್ ಸಂಬಂಧ ಅರ್ಚನಾಳ 3ನೇ ಪತಿ ನವೀನ್ಕುಮಾರ್, ಪುತ್ರಿ ಯುವಿಕಾ ರೆಡ್ಡಿ ಮತ್ತು ನವೀನ್ ಸ್ನೇಹಿತರಾದ ಸಂತೋಷ್, ಅನೂಪ್, ಆನಂದ್, ನರೇಂದ್ರ ಮತ್ತು ದೀಪು ಎಂಬುವರನ್ನು ಬಂಧಿಸಲಾಗಿದೆ. ಅರ್ಚನಾಳ ಆಸ್ತಿ ಕಬಳಿಸಿ ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ನಡುರಸ್ತೆಯಲ್ಲಿ ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ತಪ್ಪೊಪ್ಪಿಕೊಂಡಿದ್ದು, ಇದಕ್ಕೆ ಯುವಿಕಾ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ.
ಅರ್ಚನಾರೆಡ್ಡಿ ಕೇಸ್ಗೆ ಮತ್ತೊಂದು ಟ್ವಿಸ್ಟ್: ನವೀನ್ 2ನೇ ಅಲ್ಲ, 3ನೇ ಸಂಬಂಧ! ಆಕೆಯ ಮಗಳನ್ನೂ ಪಟಾಯಿಸಿದ್ದ…
ಲೈಂಗಿಕ ಕ್ರಿಯೆ ವಿಚಾರಕ್ಕೆ ಹಿಂಸಿಸುತ್ತಾಳೆ, ಊಟ ಹಾಕ್ತಿಲ್ಲ, ಅವಳ ಕಾಟ ಸಹಿಸಲಾಗ್ತಿಲ್ಲ… ಎಂದು ಠಾಣೆಗೆ ಬಂದ ಪತಿ
ಅರ್ಚನಾ ರೆಡ್ಡಿ ಕೊಲೆ ಕೇಸ್: ಜಿಮ್ ಟ್ರೈನರ್ ನವೀನ್ ಕೋಟ್ಯಧೀಶ ಆಗಿದ್ದೇಗೆ? EXCLUSIVE ಮಾಹಿತಿ ಇಲ್ಲಿದೆ