More

    ಮುಗಿಲೆತ್ತರದ ತೆಂಗಿನ ಮರವನ್ನು ಉಲ್ಟಾ ಹತ್ತಿಳಿಯುವ ಸಾಹಸಿ! ಬಾಗಲಕೋಟೆಯ ಕೂಲಿಕಾರನ ಪ್ರತಿಭೆ ನೋಡಿದ್ರೆ ಹುಬ್ಬೇರಿಸ್ತೀರಿ

    ಜಮಖಂಡಿ (ಬಾಗಲಕೋಟೆ): ಮುಗಿಲೆತ್ತರದ ತೆಂಗಿನಮರವನ್ನು ಏರುವುದೇ ಒಂದು ಸಾಹಸ. ಅದಕ್ಕೆ ಪೂರ್ಣ ಪರಿಣತಿ ಬೇಕು. ಆದರೆ, ಮೈಗೂರ-ಮುತ್ತೂರ ನಿವಾಸಿ ಬಾಬು ತೇರದಾಳ ಎಂಬಾತ ಸ್ಪೈಡರ್‌ಮ್ಯಾನ್ ರೀತಿ ತೆಂಗಿನಮರವನ್ನು ತಲೆಕೆಳಗಾಗಿ ಹತ್ತಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಬಾಬು ಜೀವನೋಪಾಯಕ್ಕೆ ತೆಂಗಿನಕಾಯಿ ಇಳಿಸುವ ಕಾಯಕವನ್ನೇ ನೆಚ್ಚಿಕೊಂಡಿದ್ದಾರೆ. ಸುತ್ತಲಿನ ಗ್ರಾಮಸ್ಥರು ಇವರನ್ನೇ ಕಾಯಿ ಕೀಳಲು ಕರೆಸುತ್ತಾರೆ. ಯಾವುದೇ ಸಲಕರಣೆ ಬಳಸದೆ ‘ಸ್ಪೈಡರ್‌ಮ್ಯಾನ್’ ತರ ಉಲ್ಟಾ ಮರ ಹತ್ತಿ ತೆಂಗಿನಕಾಯಿ ಕೀಳುವುದನ್ನು ನೋಡಿ ಜನ ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಾರೆ. ತೆಂಗಿನಮರ ಎಷ್ಟೇ ಎತ್ತರ ಇದ್ದರೂ ಈತ ತಲೆಕೆಳಗಾಗಿ ಏರುವುದರಲ್ಲಿ ನಿಸ್ಸೀಮ.

    ಕಲೆ ಅಂಟಿದ್ದು ಹೀಗೆ: ಎಲ್ಲರೂ ತೆಂಗಿನಮರವನ್ನು ನೇರವಾಗಿ ಏರುವುದನ್ನು ನೋಡಿದ್ದೆ ಹಾಗೂ ಏರುತ್ತಿದ್ದೆ. ನಾನೂ ಏನಾದರೂ ಹೊಸತು ಮಾಡೋಣ ಅಂದುಕೊಂಡು ಮರವನ್ನು ಉಲ್ಟಾ ಏರಲು ಆರಂಭಿಸಿದೆ. ಆರಂಭದಲ್ಲಿ ಭಯವಾದರೂ ನಂತರ ಅದೇ ಅಭ್ಯಾಸವಾಯಿತು. ತೆಂಗಿನಮರವನ್ನಷ್ಟೇ ಎಲ್ಲ ವಿದ್ಯುತ್‌ಕಂಬವನ್ನೂ ಉಲ್ಟಾ ಏರುವೆ ಎನ್ನುತ್ತಾರೆ ಬಾಬು.
    ಕಷ್ಟದ ಜೀವನ

    ಮುಗಿಲೆತ್ತರದ ತೆಂಗಿನ ಮರವನ್ನು ಉಲ್ಟಾ ಹತ್ತಿಳಿಯುವ ಸಾಹಸಿ! ಬಾಗಲಕೋಟೆಯ ಕೂಲಿಕಾರನ ಪ್ರತಿಭೆ ನೋಡಿದ್ರೆ ಹುಬ್ಬೇರಿಸ್ತೀರಿ

    ಸುತ್ತಮುತ್ತಲ ಭಾಗದಲ್ಲಿ ಎಲ್ಲೇ ಜಾತ್ರೆ, ಹಬ್ಬ-ಹರಿದಿನಗಳು ನಡೆದಾಗ ಅಲ್ಲಿ ತನ್ನ ವಿಶೇಷ ಕಲೆಯನ್ನು ಪ್ರದರ್ಶಿಸಿ ಅದರಿಂದ ಬಂದ ಹಣದಿಂದ ಹಾಗೂ ರೈತರು ಕರೆದಾಗ ಅವರ ಹೊಲದಲ್ಲಿ ತೆಂಗಿನ ಕಾಯಿ ಇಳಿಸಿ ಹೊಟ್ಟೆ ಹೊರೆಯುತ್ತಾರೆ ಬಾಬು. ಇವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ವಾಸಿಸಲು ಸ್ವಂತ ಸೂರಿಲ್ಲ, ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಹೊಟ್ಟೆ ಪಾಡಿಗೆ ತೆಂಗಿನಕಾಯಿ ಕೀಳುತ್ತಿದ್ದೆ. ಇದರಲ್ಲೇ ಸಾಧನೆ ಮಾಡಬೇಕೆಂದು ಉಲ್ಟಾ ಹತ್ತುವುದಕ್ಕೆ ಪ್ರಯತ್ನಿಸಿ ಯಶಸ್ವಿಯಾದೆ. ನಮ್ಮ ಸುತ್ತಲಿನ ಗ್ರಾಮಸ್ಥರ ಸಹಕಾರದಿಂದ ಜೀವನ ನಡೆಯುತ್ತಿದೆ. ಅವರಿಗೆ ಋಣಿಯಾಗಿದ್ದೇನೆ. ಸರ್ಕಾರದಿಂದ ಮನೆ ದೊರೆತು, ಆರ್ಥಿಕ ಸಹಾಯವಾದರೆ ಬದುಕು ಸುಲಭವಾಗುತ್ತದೆ.
    | ಬಾಬು ತೇರದಾಳ ಉಲ್ಪಾ ತೆಂಗಿನಮರ ಹತ್ತುವ ಸಾಹಸಿ

    ಬಾಬು ತೇರದಾಳ ಕಡು ಬಡವರಾದರೂ ತನ್ನದೇ ವಿಶೇಷ ಕಲೆಯಿಂದ ಖ್ಯಾತಿ ಹೊಂದಿದ್ದಾರೆ. ಇಂಥವರಿಗೆ ಪ್ರೋತ್ಸಾಹ, ಆರ್ಥಿಕ ಸಹಾಯ ಮಾಡಬೇಕು. ಸರ್ಕಾರ, ದಾನಿಗಳು ಗಮನಹರಿಸಬೇಕು.
    | ಭೀಮಪ್ಪ ಸವದಿ ಬಸು ಮಿರ್ಜಿ ಗ್ರಾಪಂ ಸದಸ್ಯ, ಮೈಗೂರ

    ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್​ ಗ್ರೂಪ್​ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಬೆಡ್​ ರೂಂನಲ್ಲಿ 15 ಅಡಿ ಗುಂಡಿ ತೋಡಿದ ಯುವಕ! ಪೊಲೀಸರು ಹೋಗದಿದ್ದಲ್ಲಿ ನಡೆಯುತ್ತಿತ್ತು ಮಹಾ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts