ಬೆಂಗಳೂರು: ‘ಓಂ’, ‘ಶ್’, ‘ಉಪೇಂದ್ರ’, ‘ಸೂಪರ್’, ‘ಉಪ್ಪಿ-2’… ಹೀಗೆ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಟ ಉಪೇಂದ್ರ ಅವರು ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬಹುನಿರೀಕ್ಷಿತ ಹೊಸ ಸಿನಿಮಾದ ಪಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ತನ್ನ ಸಿನಿಮಾಗಳಿಗೆ ಭಿನ್ನ-ವಿಭಿನ್ನ ಟೈಟಲ್ ಇಡುವುದರಲ್ಲೂ ಫೇಮಸ್ ಆಗಿರುವ ಉಪೇಂದ್ರ ಅವರು, ಈ ಬಾರಿಯೂ ಅಂಥದ್ದೇ ಒಂದು ಹೊಸ ಟೈಟಲ್ ಕೊಟ್ಟು ಅಭಿಮಾನಿಗಳ ತಲೆಗೆ ಕೆಲಸ ಹಚ್ಚಿದ್ದಾರೆ.
ಹೊಸ ಸಿನಿಮಾದ ಪೋಸ್ಟರ್ನಲ್ಲಿ ಕೊಂಬು ಇರುವ ಕುದುರೆ ಮೇಲೆ ಉಪೇಂದ್ರ ಸವಾರಿ ಮಾಡುತ್ತಿದ್ದು, ಅವರ ಲುಕ್ ಕೂಡ ಗಮನ ಸೆಳೆಯುತ್ತಿದೆ. ಕೆಳಗೆ ಕುದುರೆಯ ಲಾಳಾಕೃತಿಯಲ್ಲಿ ಇಂಗ್ಲಿಷ್ನ ‘U'(ಯು) ಶೀರ್ಷಿಕೆ ಇಟ್ಟು. ಅದರ ಮಧ್ಯೆ ಬೆಂಕಿಯಲ್ಲಿ ಉದ್ದ ನಾಮ ಎಳೆದದಿದ್ದಾರ. ಇದು ಕುದುರೆ ಲಾಳವೋ, ಮೂರು ನಾಮವೋ, ಉಗುರಿನ ಮೇಲೆ ಮತದಾನದ ಇಂಕು ಹಚ್ಚಿದ ಗುರುತೋ… ಎಂದು ಅಭಿಮಾನಿಗಳು ಚರ್ಚಿಸುತ್ತಾ, ಇಂತಹದ್ದೇ ಸಿನಿಮಾಗಾಗಿ ಕಾಯ್ತಿದ್ದೀವಿ ಎಂದು ಖುಷಿಯಾಗಿದ್ದಾರೆ.
ಹೊಸ ಸಿನಿಮಾದ ಫಲ್ಟ್ ಲುಕ್ನ ಪೋಸ್ಟರ್ ಅನ್ನು ಶುಕ್ರವಾರ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿರುವ ಉಪೇಂದ್ರ, ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಚಿತ್ರದ ಅಡಿಬರಹವನ್ನು 7 ಭಾಷೆಯಲ್ಲಿ ಅಂದರೆ, ಒಂದೊಂದು ಪದವನ್ನು ಒಂದೊಂದು ಭಾಷೆಯಲ್ಲಿ ಬರೆಯಲಾಗಿದೆ. ಆರಂಭದಲ್ಲಿ ‘ಇವನು’ ಎಂಬ ಪದ ಕನ್ನಡದಲ್ಲಿದೆ. ‘ಇವನು ಹೇಗೆ ಬರುತ್ತಾನೆ ಎಂದು ತಿಳಿದಿಲ್ಲ. ಆದರೆ, ಖಂಡಿತ ಬರುತ್ತಾನೆ’ ಎಂಬ ಅಡಿಬರಹ ಇದೆ. ಈ ಸಿನಿಮಾವನ್ನು ಜಿ.ಮನೋಹರ್ ಮತ್ತು ಶ್ರೀಕಾಂತ್ ಕೆ.ಪಿ. ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಉಪೇಂದ್ರ ಅವರೇ ನಿರ್ದೇಶಕ ಹಾಗೂ ನಾಯಕ.
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏#nimmaupendra #uppidirects #laharifilm #venusenterrtainers @LahariFilm @kp_sreekanth @LahariMusic pic.twitter.com/YrMlCXyyyS
— Upendra (@nimmaupendra) March 11, 2022
ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ
ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ
ತುಮಕೂರು ಮಾಜಿ ಕಾರ್ಪೋರೇಟರ್ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ