ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪ್ರಕರಣದ ಆರೋಪಿ, ಭಗ್ನಪ್ರೇಮಿ ನಾಗೇಶ್ ಕೃತ್ಯ ಎಸಗಲು 10 ದಿನ ಮೊದಲೇ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.
ಯುವತಿಯ ಮೇಲೆ ಆಸಿಡ್ ಎರಚಲು ಸಂಚು ರೂಪಿಸಿದ್ದಲ್ಲದೆ, ತನ್ನ ಗಾರ್ಮೆಂಟ್ಸ್ ಫ್ಯಾಕ್ಟರಿ ಖಾಲಿ ಮಾಡುವ ಸಲುವಾಗಿ ಸ್ಟಾಕ್ ಸಂಪೂರ್ಣವಾಗಿ ಮಾರಾಟ ಮಾಡಿದ್ದ. ಗಿರಾಕಿಯೊಬ್ಬರನ್ನು ಹಿಡಿದು 1 ಲಕ್ಷ ರೂ.ಗಳಿಗೆ ಸ್ಟಾಕ್ ಕ್ಲಿಯರೆನ್ಸ್ ಮಾಡಿದ್ದ. ಆ್ಯಸಿಡ್ ಹಾಕುವ ಹಿಂದಿನ ದಿನ ಹಣ ಪಡೆದಿದ್ದ. ಸದ್ಯ ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಫೋನ್, ಎಟಿಎಂ, ಆನ್ಲೈನ್, ಬ್ಯಾಂಕ್ ಖಾತೆಯನ್ನು ಆರೋಪಿ ಬಳಸುತ್ತಿಲ್ಲ ಎಂದು ತಿಳಿದುಬಂದಿದೆ.
ಆ್ಯಸಿಡ್ ಹಾಕಿದ ಬಳಿಕ ಆರೋಪಿಯು ಪಲ್ಸರ್ ಬೈಕ್ನಲ್ಲಿ ಮೆಜೆಸ್ಟಿಕ್ಗೆ ಬಂದು ಅದನ್ನು ಅಲ್ಲೇ ಬಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸಕೋಟೆ ಮಾರ್ಗವಾಗಿ ಮಾಲೂರಿಗೆ ತೆರಳಿರುವುದು ಗೊತ್ತಾಗಿದೆ. ಆ ಬಳಿಕ ಅಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಹೀಗಾಗಿ ಪೊಲೀಸರು ತಿರುಪತಿ ಹಾಗೂ ತಮಿಳುನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಹಾಡಹಗಲೇ ಯುವತಿ ಮೇಲೆ ಆ್ಯಸಿಡ್ ಎರಚಿದ ಭಗ್ನಪ್ರೇಮಿ! ಯುವತಿಯ ನರಳಾಟ ನೋಡಲಾಗ್ತಿಲ್ಲ