More

    ತೋಟದಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಸಗಣಿ ಗುಂಡಿಗೆ ಬಿದ್ದು ಸಾವು

    ಹೆಬ್ರಿ: ತೋಟದಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಸಗಣಿ ಗುಂಡಿಗೆ ಬಿದ್ದು ದುರಂತ ಅಂತ್ಯ ಕಂಡ ಘಟನೆ ಉಡುಪಿ ಜಿಲ್ಲೆ ಹೆಬ್ರಿ ಗ್ರಾಮದ ಬಚ್ಚಪ್ಪು ಎಂಬಲ್ಲಿ ಸಂಭವಿಸಿದೆ.

    ಆಂಟನಿ ಎಂಬುವವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಜಾರ್ಖಂಡ್​ ಮೂಲದ ಸೋಮೇಶ್ವರ ಓಕಾನ್​ ಎಂಬುವರ ಮಗು ಮುನೇಶ್ವರ(4) ಮೃತ ದುರ್ದೈವಿ.

    ತಂದೆ ಓಕಾನ್​ ತೋಟದಲ್ಲಿ ಸೋಮವಾರ ಬೆಳಗ್ಗೆ ಕೆಲಸ ಮಾಡುತ್ತಿದ್ದರು. ಅತ್ತ ಮಗು ಆಟವಾಡುತ್ತಿತ್ತು. ಬೆಳಗ್ಗೆ 11.15ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಆಟವಾಡುತ್ತಾ ಮಗು ಸಗಣಿ ಗುಂಡಿಗೆ ಬಿದ್ದಿರಬೇಕೆಂದು ಅಂದಾಜಿಸಲಾಗಿದೆ. ಸೋಮೇಶ್ವರ ಓಕಾನ್​ 6 ವರ್ಷದಿಂದ ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೆಬ್ರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

    ಗೆಸ್ಟ್​ ಹೌಸ್​ನ ಹಾಸಿಗೆ, ಮಂಚ, ಯೋಗ ಮ್ಯಾಟ್… ಡಿಸಿ ನಿವಾಸಕ್ಕೆ ಶಿಫ್ಟ್​: ಹಿಂತಿರುಗಿಸುವಂತೆ ಪತ್ರ ಬರೆದರೂ ರೋಹಿಣಿ ಸಿಂಧೂರಿ ಮೌನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts