ಶಿರಹಟ್ಟಿ: ಪಟ್ಟಣದ ಪಿಡಬ್ಲ್ಯುಡಿ ಇಲಾಖೆಯು ಕಳೆದರೆಡು ದಿನದಿಂದ ಪಟ್ಟಣದ ಖಬರಸ್ತಾನ ಬಳಿಯ ಶಿರಹಟ್ಟಿ- ಲಕ್ಷೆ್ಮೕಶ್ವರ ರಸ್ತೆ, ಬಾಗಲಕೋಟೆ- ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿಯ ಛಬ್ಬಿ, ಬೆಳ್ಳಟ್ಟಿ, ದೇವಿಹಾಳ ರಸ್ತೆ, ಜತೆಗೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ದುರಸ್ತಿ ಕಾರ್ಯ ಆರಂಭಿಸಿದೆ.
ಕೇಂದ್ರ ಸ್ಥಳದಿಂದ ನಿತ್ಯ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ-57ರ ಮೂಲಕ ನೂರಾರು ವಾಹನಗಳು ಓಡಾಡುತ್ತವೆ. ಪಟ್ಟಣದಿಂದ ಅರ್ಧ ಕಿಮೀ ಸಾಗಿದಂತೆ ಕಿತ್ತು ಹೋದ ರಸ್ತೆ ಹಾಗೂ ತಗ್ಗು-ಗುಂಡಿ ಬಿದ್ದಿದ್ದವು. ಜತೆಗೆ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳ ರಸ್ತೆಗಳು ಅತಿ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದವು. ರಸ್ತೆ ದುರಸ್ತಿ ಮಾಡದ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ‘ಹದಗೆಟ್ಟ ರಾಜ್ಯ ಹೆದ್ದಾರಿ, ತಪ್ಪದ ಕಿರಿಕಿರಿ’ ಎಂಬ ಶೀರ್ಷಿಕೆಯಡಿ 2019ರ ಡಿ. 5 ರಂದು ವಿಜಯವಾಣಿ ವಿಶೇಷ ವರದಿ ಪ್ರಟಿಸಿತ್ತು. ಆಗ ಪಿಡಬ್ಯೂಡಿ ಎಇ ಹೊಸಮನಿ ಅವರು ಭೀಕರ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ದೊರೆತ ಬಳಿಕ ಕೆಲಸ ಆರಂಭಿಸುವುದಾಗಿ ಹೇಳಿದ್ದರು. ಈಗ ದುರಸ್ತಿ ಕೆಲಸ ಆರಂಭಿಸಿದ್ದಾರೆ.