ವಿಜಯವಾಣಿ ಸುದ್ದಿಜಾ ಹುಬ್ಬಳ್ಳಿ: ಇಂಜಿನಿಯರ್ ಶಿಕ್ಷಣದಲ್ಲಿ ನಾವೀನ್ಯತೆ ಬೆಳೆಸುವಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು.
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಇನ್ನೋವೇಶನ್ ಸೆಲ್ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ವತಿಯಿಂದ ಆಯೋಜಿಸಿದ್ದ 5 ದಿನಗಳ ಆವಿಷ್ಕಾರ, ವಿನ್ಯಾಸ ಮತ್ತು ಉದ್ಯಮಶೀಲತೆ ಕುರಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಜಿನಿಯರ್ಗಳಲ್ಲಿ ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಭಾಗವಹಿಸಿದವರು ಮತ್ತು ಮಾರ್ಗದರ್ಶಕರು ತಮ್ಮ ಆಳವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದರು.
ಸಿಐಪಿಡಿ ಸಹಾಯಕ ನಿರ್ದೇಶಕ ಹರೀಶ ಅಗಡಿ, ಸಿ-ಟೈ ನಿರ್ದೇಶಕ ಶಿವಯೋಗಿ ತರಮರಿ, ಕೆಎಲ್ಇ ತಾಂತ್ರಿಕ ವಿವಿ ಡೀನ್ ಪ್ರೊ. ಬಿ.ಎಲ್. ದೇಸಾಯಿ, ವಿಶಾಲ ನಾಯರ್, ಧನುಶ್ ಎಚ್.ಬಿ., ಇತರರು ಪಾಲ್ಗೊಂಡಿದ್ದರು.
ಪ್ರೊ. ಬಿ.ಎಸ್. ಅನಾಮಿ ಸ್ವಾಗತಿಸಿದರು. ಪ್ರೊ. ಶ್ರದ್ಧಾ ವಂದಿಸಿದರು.