ಗದಗ:
ತಾಲೂಕಿನ ಅಡವಿ ಸೋಮಾಪುರ ಬಳಿ ಭೀಕರ ರಸ್ತೆ ಅಪಘಾತ ನಡೆದ ಹಿನ್ನೆಲೆ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಟನೆ ಸೋಮವಾರ ಮಧ್ಯಾಹ್ನ ಜರುಗಿದೆ.
ಅಡವಿಸೋಮಾಪುರ ರಸ್ತೆಯ ಮಲ್ಲಿಕಾರ್ಜುನ ಮಠದ ಸಮೀಪ ಈ ರ್ದುಟನೆ ನಡೆದಿದ್ದು, ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್(50), ಛಬ್ಬಿ ತಾಂಡಾದ ಶಿವಾನಂದ ಲಮಾಣಿ(33) ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ ಚೌಹ್ವಾನ್(30) ಮೃತ ದುರ್ದೈವಿಗಳು.
ಮೃತ ಸವಾರರು ಗದಗ ಪಟ್ಟಣದೆಡೆಗೆ ಹೊರಟ್ಟಿದ್ದರು. ಗದಗ ನಗರದಿಂದ ಕಾರು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ಗಳು ಸರಣಿ ಅಪಘಾತಕ್ಕೆ ಈಡಾಗಿವೆ. ಮೃತರಲ್ಲಿ ಇಬ್ಬರು ಮದುವೆಗೆ ಬೇಕಾಗಿದ್ದ ವಸ್ತುಗಳನ್ನು ಖರೀದಿಸಲು, ಇನ್ನೊರ್ವ ಹಲ್ಲು ನೋವಿನ ಚಿತ್ಸೆಗೆ ಗದಗ ನಗರಕ್ಕೆ ಹೊರಟಿದ್ದರು ಎಂದು ತಿಳಿಸು ಬಂದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.