ಬೆಂಗಳೂರು: ಕನ್ನಡದಲ್ಲಿ ಮೆಡಿಕಲ್ ಮಾಫಿಯಾ ಕುರಿತಾದ ಹಲವು ಚಿತ್ರಗಳು ಇದುವರೆಗೂ ಬಂದಿವೆ. ಆ ಸಾಲಿಗೆ ಈ ಶುಕ್ರವಾರ (ಡಿ.9) ಇನ್ನೊಂದು ಚಿತ್ರ ಹೊಸದಾಗಿ ಸೇರ್ಪಡೆಯಾಗಲಿಎ. ಅದೇ ‘ಕ್ಷೇಮಗಿರಿಯಲ್ಲಿ ಕರ್ ನಾಟಕ’.
ಇದನ್ನೂ ಓದಿ: ‘ತಿಮ್ಮನ ಮೊಟ್ಟೆಗಳು’ ಚಿತ್ರೀಕರಣ ಪೂರ್ಣ; ಇದು ಮಲೆನಾಡಿನ ಇನ್ನೊಂದು ಕಥೆ …
ಈ ಚಿತ್ರವನ್ನು ಪೀಟರ್ ರಾಜಣ್ಣ ನಿರ್ದೇಶನ ಮಾಡಿದ್ದು, ಅವರ ತಾಯಿ ಮೈಕಲ್ ರಾಣಿ ನಿರ್ಮಿಸಿದ್ದಾರೆ. ಚಿತ್ರ ಮಾಡಬೇಕು ಎಂಬ ಮಗನ ಕನಸನ್ನು ತಾಯಿ ನನಸು ಮಾಡಿರುವುದು ವಿಶೇಷ.
ಈ ಚಿತ್ರದ ಕುರಿತು ಮಾತನಾಡುವ ಪೀಟರ್ ರಾಜಣ್ಣ, ‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿ, ಪ್ರೇಗ್ನಲ್ಲಿ ನಿರ್ದೇಶನದ ಕುರಿತು ತರಬೇತಿ ಪಡೆದಿದ್ದೇನೆ. ಆ ಅನುಭವದಿಂದ ಈ ಚಿತ್ರ ಮಾಡಿದ್ದು. ಜಗದೀಶ್ ನಾಯಕನಾಗಿ, ಶ್ರದ್ಧಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ಪ್ರತಿಭೆಗಳು ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.
ಇಲ್ಲಿ ‘ಕ್ಷೇಮಗಿರಿ’ ಎಂದರೆ ಊರಿನ ಹೆಸರಂತೆ. ಜತೆಗೆ ಮೆಡಿಕಲ್ ಮಾಫಿಯಾ ಬಗ್ಗೆಯೂ ಒಂದಿಷ್ಟು ವಿಷಯಗಳಿವೆಯಂತೆ. ಚಿತ್ರದಲ್ಲಿ ಹತ್ತು ಹಾಡುಗಳಿದೆ. ರವಿಶಂಕರ್ ಗುಂಡ್ಮಿ ಸಂಗೀತ ನೀಡಿದ್ದಾರೆ. ವಿ.ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಖತರ್ನಾಕ್ ‘ರಾಕ್ಷಸರ’ನ್ನು ಬೇಟೆ ಆಡಲು ಹೊರಟ ಸಾಯಿಕುಮಾರ್ …
‘ಕ್ಷೇಮಗಿರಿಯಲ್ಲಿ ಕರ್ ನಾಟಕ’ ಚಿತ್ರದಲ್ಲಿ ವಿನುತಾ, ನೀನಾಸಂ ಚೇತನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು 30ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗುತ್ತಿದೆ.
ಹಾಡಿನೊಂದಿಗೆ ಮುಕ್ತಾಯವಾಯಿತು ಪೃಥ್ವಿ ಅಂಬರ್, ಮಿಲನಾ ಅಭಿನಯದ ಹೊಸ ಚಿತ್ರ …