ವಿಜಯಪುರ: ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅವರ ಸಹೋದರನ ದೌರ್ಜನ್ಯಕ್ಕೆ ಅಮಾಯಕ ಯುವಕನೊಬ್ಬ ಬಲಿಯಾಗಿರುವ ಆರೋಪ ಕೇಳಿಬಂದಿದೆ. ಸಾವಿಗೂ ಮುನ್ನ ಮೃತ ಯುವಕ ವಿಡಿಯೋ ಮಾಡಿ, ಫೇಸಬುಕ್ನಲ್ಲಿ ಹರಿಬಿಟ್ಟಿದ್ದಾನೆ. ಇದಲ್ಲದೆ, ಡೆತ್ನೋಟ್ ಸಹ ಬರೆದಿಟ್ಟಿದ್ದಾನೆ.
ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ ಹಾಗೂ ಅವರ ಸಹೋದರ ಸಚೀನ್ ಗೆಜ್ಜಿ, ರವಿ ದೇಗಿನಾಳ ಹಾಗೂ ಸಂತೋಷ ದೇಗಿನಾಳ ಹೆಸರಲ್ಲಿ ಡೆತ್ನೋಟ್ ಬರೆದಿಟ್ಟು ಯುವಕ ಸೋಮನಾಥ ನಾಗಮೂತಿ (25) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ 5 ದಿನದಿಂದ ನಾಪತ್ತೆಯಾಗಿದ್ದ ಸೋಮನಾಥ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಜುಲೈ 8ರಂದು ಫೇಸಬುಕ್ನಲ್ಲಿ ಪೊಲೀಸ್ ದೌರ್ಜನ್ಯದ ಬಗ್ಗೆ ಸೋಮನಾಥ ವಿಡಿಯೋ ಮಾಡಿದ್ದ. ಇದಾದ ಬಳಿಕ ಆತ ನಾಪತ್ತೆಯಾಗಿದ್ದ. ಇಂದು ಆತನ ಶವ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ಪಾತ್ರದಲ್ಲಿ ಪತ್ತೆಯಾಗಿದೆ.
ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳಾದ ಪಿಎಸ್ಐ ಸೋಮೇಶ ಗೆಜ್ಜಿಯನ್ನು ವಜಾ ಮಾಡಬೇಕು ಹಾಗೂ ಉಳಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ವಿಜಯಪುರ ನಗರದಲ್ಲಿರುವ ಶಿವಗಿರಿ ಚೆಸ್ ಆ್ಯಂಡ್ ವ್ಹೀಲ್ಸ್ ಗ್ಯಾರೇಜ್ನಲ್ಲಿ ಮೃತ ಸೋಮನಾಥ ಕೆಲಸ ಮಾಡುತ್ತಿದ್ದ. ಪಿಎಸ್ಐ ಸೊಮೇಶ ಗೆಜ್ಜಿ ಅವರ ಸಹೋದರ ಸಚೀನ ಗೆಜ್ಜಿ ತನ್ನ ಕಾರನ್ನು ಸರ್ವಿಸ್ಗೆ ಬಿಟ್ಟಿದ್ದರು. ಈ ವೇಳೆ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣ ಕಾಣೆಯಾಗಿತ್ತು. ಈ ಹಣವನ್ನು ಸೋಮನಾಥನೇ ಕದ್ದಿದ್ದಾನೆ ಎಂದು ಎಪಿಎಂಸಿ ಠಾಣೆಗೆ ಹೊತ್ತೊಯ್ದ ಪೊಲೀಸರು, ಸೋಮನಾಥನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಮಾಡದ ತಪ್ಪಿಗೆ ಪಿಎಸ್ಐ ಸೊಮೇಶ ಗೆಜ್ಜಿ ಹಾಗೂ ಪೊಲೀಸರಿಂದ ಹೊಡೆತ ತಿಂದು ಅವಮಾನ ಸಹಿಸದೆ ಸೋಮನಾಥ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಂದು ಲಕ್ಷ ರೂಪಾಯಿ ಕೊಡುವಂತೆ ಪೊಲೀಸರು ಪೀಡಿಸಿದ್ದರು. ಅಲ್ಲದೆ, ಒಂದು ಬಿಳಿ ಹಾಳೆಯ ಮೇಲೆ ಯುವಕನಿಂದ ಸಹಿ ಮಾಡಿಸಿಕೊಂಡಿದ್ದರು. ಕಾರ್ ಗ್ಯಾರೇಜ್ ಮಾಲೀಕರಾದ ಸಂತೋಷ ದೆಗಿನಾಳ ಹಾಗೂ ರವಿ ದೆಗಿನಾಳ ಸಹ ಹಣ ಕೊಡು ಇಲ್ಲದಿದ್ದರೆ, ನಿನ್ನ ಮೇಲೆ ಕೇಸ್ ಬುಕ್ ಮಾಡಿ ಒದ್ದು ಒಳಗೆ ಹಾಕ್ತಾರೆ ಎಂದು ಹೆದರಿಸಿದ್ದರು. ಇವರೆಲ್ಲರ ಕುತಂತ್ರಕ್ಕೆ ನಾನು ಬಲಿಯಾಗ್ತಿದ್ದೇನೆ ಎಂದು ವಿಡಿಯೋ ಮಾಡಿ, ಫೇಸ್ಬುಕ್ಗೆ ಅಪಲೋಡ್ ಮಾಡಿ ಸೋಮನಾಥ ಸಾವಿನ ಹಾದಿ ಹಿಡಿದಿದ್ದಾನೆ. (ದಿಗ್ವಿಜಯ ನ್ಯೂಸ್)
ಗಂಡನಿಲ್ಲದ ವೇಳೆ ಮಹಿಳೆಯ ಮನೆಗೆ ನುಗ್ಗಿ ರೇಪ್: ಬಂಧಿತ ಸಿಐ ಹಿನ್ನೆಲೆ ನೋಡಿ ತನಿಖಾಧಿಕಾರಿಗಳು ಶಾಕ್!
ಯಶಿಕಾ ಆನಂದ್ ಬಿಕಿನಿ ಫೋಟೋ ವೈರಲ್: ನಟಿಯ ಹಾಟ್ ಅವತಾರ ಕಂಡು ಹುಬ್ಬೇರಿಸಿದ ನೆಟ್ಟಿಗರು!
ಬಂಧನ ಭಯ…ಪರಾರಿಯಾದ ಗೋತಬಯ! ಇಂದು ಬೆಳಗ್ಗೆಯೇ ವಿಮಾನದಲ್ಲಿ ಲಂಕಾ ಅಧ್ಯಕ್ಷರು ಹಾರಿದ್ದೆಲ್ಲಿಗೆ?