ಕೊಡಗು: ಇನ್ನು 12 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವ ವಕೀಲ ದುರಂತ ಅಂತ್ಯಕಂಡಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ಮೈಸೂರು ನಗರದ ಗಾಂಧಿನಗರ ನಿವಾಸಿ ಜಯಲಕ್ಷ್ಮೀ ಮತ್ತು ಸುಬ್ರಹ್ಮಣಿಸ್ವಾಮಿ ದಂಪತಿ ಪುತ್ರ ವಿಶ್ವನಾಥ್(29) ಮೃತ ದುರ್ದೈವಿ. ಈತ ಮೈಸೂರಿನಲ್ಲಿ ವಕೀಲಿ ವೃತ್ತಿ ತರಬೇತಿ ಪಡೆಯುತ್ತಿದ್ದ. ಬೆಂಗಳೂರಿನ ಬಾಣಸವಾಡಿಯ ಯುವತಿ ಜತೆ ವಿಶ್ವನಾಥ್ ಮದುವೆ ನಿಶ್ಚಯವಾಗಿತ್ತು. ಸೆ.19ರಂದು ನಡೆಯಬೇಕಿದ್ದ ಮದವೆಯ ಆಹ್ವಾನ ಪತ್ರಿಕೆಯನ್ನು ಬಹುತೇಕ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಲಾಗಿತ್ತು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿದ್ದ ತನ್ನ ಅಜ್ಜಿಗೂ ಆಹ್ವಾನ ಪತ್ರಿಕೆ ಕೊಡಲು ಬಂದ ವಿಶ್ವನಾಥ್ ಮತ್ತು ಇವರ ಜತೆ ಬೆಟ್ಟದಪುರದ ದಿನೇಶ್ ಮೇಲೆ ಲಾರಿ ರೂಪದಲ್ಲಿ ಬಂದ ಜವರಾಯ ಇಬ್ಬರ ಪ್ರಾಣವನ್ನೂ ಹೊತ್ತೊಯ್ದಿದ್ದಾನೆ.
ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವಿಶ್ವನಾಥ್ ಮತ್ತು ದಿನೇಶ್ ಇಬ್ಬರ ಮೇಲೂ ಮಡಿಕೇರಿಯ ಚೈನ್ಗೇಟ್ ಬಳಿ ಲಾರಿ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂತಹ ಭೀಕರ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…