ನವದೆಹಲಿ : ಕರೊನಾ ಮಹಾಮಾರಿಯಿಂದ ಸಂರಕ್ಷಣೆ ಒದಗಿಸುವ ಲಸಿಕೆಗಳನ್ನು ಆದಷ್ಟು ಬೇಗ ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ದೇಶಾದ್ಯಂತ ನಡೆಯುತ್ತಿದೆ. ಈ ಅಭಿಯಾನಕ್ಕೆ ಬೆಂಬಲ ಒದಗಿಸಲು ದೆಹಲಿಯ ವಸಂತ ವಿಹಾರದ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತ ಅಭಿಷೇಕ್ ಜೈನ್ ಹೊಸ ಉಪಾಯ ಹುಡುಕಿದ್ದಾರೆ. ಹಲವಾರು ಜನವಸತಿ ಶಿಬಿರಗಳ ಬಡಜನರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಹೋಗಿಬರುವ ಅನುಕೂಲಕ್ಕಾಗಿ ಅವರು ಬಸ್ ಸೇವೆ ಒದಗಿಸುತ್ತಿದ್ದಾರೆ.
ಈಗಾಗಲೇ 500 ಜನರು ಈ ಬಸ್ನ ಉಚಿತ ಪಿಕ್ಅಪ್ ಮತ್ತು ಡ್ರಾಪ್ ಸೇವೆಯ ಪ್ರಯೋಜನ ಪಡೆದಿದ್ದು, ಬಡ ನಿವಾಸಿಗಳು ಈ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ. ವಸಂತ ವಿಹಾರದ ಕೂಲಿ ಕ್ಯಾಂಪ್, ಶಿವ ಕ್ಯಾಂಪ್, ಸೇವಾ ಕ್ಯಾಂಪ್, ಶ್ರೀ ರಾಮ್ ಜೆಜೆ ಶಾಸ್ತ್ರಿ ಮಾರ್ಕೆಟ್ ಕ್ಯಾಂಪ್, ನೇಪಾಳಿ ಕ್ಯಾಂಪ್, ವಸಂತ್ ಗಾವ್ ಮುಂತಾದೆಡೆಯಿಂದ ಜನರನ್ನು ಈ ಬಸ್ ಲಸಿಕಾ ಕೇಂದ್ರಕ್ಕೆ ಒಯ್ಯುತ್ತಾ ಇದೆ ಎನ್ನಲಾಗಿದೆ. (ಏಜೆನ್ಸೀಸ್)
ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್ಐ ಬಂಧನ