ದೆಹ್ರಾಡೂನ್: ಕೋವಿಡ್-19 ಪಿಡುಗು ಹೆಚ್ಚಾಗುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರ ರಾತ್ರಿ ದಿಢೀರನೆ ದೇಶಾದ್ಯಂತ ಲಾಕ್ಡೌನ್ ಘೋಷಿಸಿದರು. ಇದರಿಂದಾಗಿ ತಮ್ಮ ತಮ್ಮ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಮಕ್ಕಳಾದಿಯಾಗಿ ಎಲ್ಲರೂ ಭಾರಿ ಸಂಕಷ್ಟ ಅನುಭವಿಸಿದರು.
ಅವರೆಲ್ಲರಂತೆ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ 9 ವರ್ಷದ ಬಾಲಕ ಕೂಡ ದೆಹ್ರಾಡೂನ್ನ ವಸತಿಯುತ ಶಾಲೆಯ ವಿದ್ಯಾರ್ಥಿನಿಲಯದಲ್ಲೇ ಉಳಿದುಕೊಳ್ಳುವ ಅನಿವಾರ್ಯತೆಗೆ ಸಿಲುಕಿಕೊಂಡ. ಉತ್ತರ ಪ್ರದೇಶದಲ್ಲಿದ್ದ ಬಾಲಕನ ಪಾಲಕರು ದೆಹ್ರಾಡೂನ್ಗೆ ಬಂದು ಮಗನನ್ನು ಕರೆದೊಯ್ಯುವುದು ಸಾಧ್ಯವಾಗದೇ ಇದ್ದದ್ದು ಇದಕ್ಕೆ ಕಾರಣ.
ಆದರೆ, ಒಂದು ತಿಂಗಳ ಹಿಂದೆ ಹಾಸ್ಟೆಲ್ನ ವಾರ್ಡನ್ ಈ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಅಲ್ಲದೆ, ಬಾಲಕನ ಮೇಲೆ ಅತ್ಯಾಚಾರವನ್ನೂ ಎಸಗಿದ್ದ. ತಾನು ನರಕಯಾತನೆ ಅನುಭವಿಸುತ್ತಿದ್ದರೂ ಅದನ್ನು ಪಾಲಕರಿಗಾಗಲಿ ತನ್ನ ಸಹಪಾಠಿಗಳಿಗಾಗಿ ತಿಳಿಸಲಾಗದೆ ಅಸಹಾಯಕ ಸ್ಥಿತಿ ಆ ಬಾಲಕನದ್ದಾಗಿತ್ತು.
ಇದನ್ನೂ ಓದಿ: ಕೋಟಿ ವೇತನ ಪಡೆದ ಶಿಕ್ಷಕಿ ನೇಮಕಾತಿಗೆ ಕೊಟ್ಟಿದ್ದಳು 5 ಲಕ್ಷ ರೂ. ಲಂಚ
ಆದರೆ ಇತ್ತೀಚೆಗೆ ಅನ್ಲಾಕ್ 1.0 ಜಾರಿಗೆ ಬಂದ ಬಳಿಕ ಬಾಲಕನನ್ನು ಕರೆದೊಯ್ಯಲು ಪಾಲಕರು ಶನಿವಾರ ದೆಹ್ರಾಡೂನ್ಗೆ ಬಂದಾಗ, ಆತ ತಾನು ಅನುಭವಿಸಿದ ನರಕಯಾತನೆಯನ್ನು ಪಾಲಕರಿಗೆ ತಿಳಿಸಿದ್ದ. ಈತನ ಹೇಳಿಕೆಯನ್ನು ಆಧರಿಸಿ ಶನಿವಾರ ಸಂಜೆ ವಾರ್ಡನ್ ವಿರುದ್ಧ ರಾಯ್ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದರು. ಅದರನ್ವಯ ಪೊಲೀಸರು ವಾರ್ಡನ್ನನ್ನು ಬಂಧಿಸಿದ್ದಾರೆ.
ಇದೇ ಮೊದಲಲ್ಲ: ಈ ಬಾಲಕನ ಮೇಲೆ ಅತ್ಯಾಚಾರ ನಡೆದದ್ದು ಇದೇ ಮೊದಲಲ್ಲ. ಈ ಹಿಂದೆ ಶಾಲೆಯ ವಿದ್ಯಾರ್ಥಿಯೊಬ್ಬ ಈ ಬಾಲಕನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಈ ವಿಷಯ ಪಾಲಕರ ಗಮನಕ್ಕೆ ಬರುತ್ತಲೇ ಆ ಬಾಲಕನ ವಿರುದ್ಧ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ದೂರು ದಾಖಲಿಸಿದ್ದರು. ಆದರೆ, ಬಾಲಕನಿಗೆ ಸಾಂತ್ವನ ಹೇಳುವ ಬದಲು ಆಡಳಿತ ಮಂಡಳಿಯ ನಿರ್ದೇಶಕರು ಬಾಲಕನನ್ನೇ ನಿಂದಿಸಿದ್ದರು ಎನ್ನಲಾಗಿದೆ.
ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಲು ಈ ಭೂಪ ಏನು ಮಾಡಿದ ನೋಡಿ…