ಭೋಪಾಲ್: ಶೌಚಗೃಹದಲ್ಲಿ ಅಜ್ಜನ ಸಹಾಯಕ್ಕೆ ಇಟ್ಟಿರುವ ಹಗ್ಗವೇ ಮೊಮ್ಮಗನಿಗೆ ಉರುಳಾಗಿರುವ ಘಟನೆ ಭೋಪಾಲದಲ್ಲಿ ನಡೆದಿದೆ.
ಉರುಳಿಗೆ ಬಲಿಯಾದ ಎಂಟು ವರ್ಷದ ಬಾಲಕ ಅಭಿನಂತ್ ತಿವಾರಿ.
ಈತ ಬೆಳಗ್ಗೆ ಶೌಚಕ್ಕೆ ಹೋಗಿದ್ದಾನೆ. ಬಾಲಕನ ಅಜ್ಜ ಕಮೊಡೊದಿಂದ ಮೇಲೆ ಏಳುವಾಗಿ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಹಗ್ಗವನ್ನು ಕಟ್ಟಲಾಗಿತ್ತು. ಬಾಲಕ ಆ ಹಗ್ಗವನ್ನು ಸುಮ್ಮನೆ ಕುತ್ತಿಗೆಗೆ ಬಿಗಿದುಕೊಂಡಿದ್ದಾರೆ. ದುರದೃಷ್ಟಕ್ಕೆ ಬಾಲಕನ ಕಾಲು ಜಾರಿಬಿಟ್ಟಿದೆ. ಇದರಿಂದ ಕುತ್ತಿಗೆಗೆ ಸಿಲುಕಿದ್ದ ಹಗ್ಗವೇ ಉರುಳಾಗಿಬಿಟ್ಟಿದೆ.
ಇದನ್ನೂ ಓದಿ: ಮಗುವಿನ ಮೇಲೆ ಬೀದಿನಾಯಿ ದಾಳಿ
ಜಾರಿಬಿದ್ದ ಶಬ್ದಕ್ಕೆ ಒಳಗಡೆ ಹೋಗಿ ಪಾಲಕರು ನೋಡಿದಾಗ ಬಾಲಕನ ಸ್ಥಿತಿ ಗಂಭೀರವಾಗಿತ್ತು. 2-3 ಆಸ್ಪತ್ರೆಗಳಿಗೆ ಹೋದರೂ ಬಾಲಕನನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ನಂತರ ಬೇರೊಂದು ಆಸ್ಪತ್ರೆಗೆ ಸಾಗಿಸುವಾಗಲೇ ಬಾಲಕ ಮೃತಪಟ್ಟಿದ್ದಾನೆ!
ಮನೆಯಲ್ಲಿ ವಯಸ್ಸಾದವರು ಇರುವಾಗ ಅಥವಾ ಇನ್ನಾರಿಗೇ ಆಗಲಿ ಇಂಥದ್ದೊಂದು ಅನುಕೂಲ ಕಲ್ಪಿಸಿದ ಸಮಯದಲ್ಲಿ ಅದರ ಬಗ್ಗೆ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ತಿಳಿಹೇಳಬೇಕು ಎಂದು ಪೊಲೀಸ್ ಇಲಾಖೆ ಇದೇ ವೇಳೆ ಸೂಚನೆ ಕೊಟ್ಟಿದೆ.
ಸಚಿವೆಗೆ ‘ಕೋವಿಡ್ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್ ಮುಖಂಡನ ಪ್ರಶ್ನೆ!