More

    ಅಜ್ಜನ ಸಹಾಯಕ್ಕೆ ಇದ್ದ ಹಗ್ಗ ಮೊಮ್ಮಗನ ಜೀವ ಪಡೆಯಿತು!

    ಭೋಪಾಲ್​: ಶೌಚಗೃಹದಲ್ಲಿ ಅಜ್ಜನ ಸಹಾಯಕ್ಕೆ ಇಟ್ಟಿರುವ ಹಗ್ಗವೇ ಮೊಮ್ಮಗನಿಗೆ ಉರುಳಾಗಿರುವ ಘಟನೆ ಭೋಪಾಲದಲ್ಲಿ ನಡೆದಿದೆ.
    ಉರುಳಿಗೆ ಬಲಿಯಾದ ಎಂಟು ವರ್ಷದ ಬಾಲಕ ಅಭಿನಂತ್​ ತಿವಾರಿ.

    ಈತ ಬೆಳಗ್ಗೆ ಶೌಚಕ್ಕೆ ಹೋಗಿದ್ದಾನೆ. ಬಾಲಕನ ಅಜ್ಜ ಕಮೊಡೊದಿಂದ ಮೇಲೆ ಏಳುವಾಗಿ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಹಗ್ಗವನ್ನು ಕಟ್ಟಲಾಗಿತ್ತು. ಬಾಲಕ ಆ ಹಗ್ಗವನ್ನು ಸುಮ್ಮನೆ ಕುತ್ತಿಗೆಗೆ ಬಿಗಿದುಕೊಂಡಿದ್ದಾರೆ. ದುರದೃಷ್ಟಕ್ಕೆ ಬಾಲಕನ ಕಾಲು ಜಾರಿಬಿಟ್ಟಿದೆ. ಇದರಿಂದ ಕುತ್ತಿಗೆಗೆ ಸಿಲುಕಿದ್ದ ಹಗ್ಗವೇ ಉರುಳಾಗಿಬಿಟ್ಟಿದೆ.

    ಇದನ್ನೂ ಓದಿ: ಮಗುವಿನ ಮೇಲೆ ಬೀದಿನಾಯಿ ದಾಳಿ

    ಜಾರಿಬಿದ್ದ ಶಬ್ದಕ್ಕೆ ಒಳಗಡೆ ಹೋಗಿ ಪಾಲಕರು ನೋಡಿದಾಗ ಬಾಲಕನ ಸ್ಥಿತಿ ಗಂಭೀರವಾಗಿತ್ತು. 2-3 ಆಸ್ಪತ್ರೆಗಳಿಗೆ ಹೋದರೂ ಬಾಲಕನನ್ನು ಅಡ್ಮಿಟ್​ ಮಾಡಿಕೊಳ್ಳಲಿಲ್ಲ. ನಂತರ ಬೇರೊಂದು ಆಸ್ಪತ್ರೆಗೆ ಸಾಗಿಸುವಾಗಲೇ ಬಾಲಕ ಮೃತಪಟ್ಟಿದ್ದಾನೆ!

    ಮನೆಯಲ್ಲಿ ವಯಸ್ಸಾದವರು ಇರುವಾಗ ಅಥವಾ ಇನ್ನಾರಿಗೇ ಆಗಲಿ ಇಂಥದ್ದೊಂದು ಅನುಕೂಲ ಕಲ್ಪಿಸಿದ ಸಮಯದಲ್ಲಿ ಅದರ ಬಗ್ಗೆ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ತಿಳಿಹೇಳಬೇಕು ಎಂದು ಪೊಲೀಸ್​ ಇಲಾಖೆ ಇದೇ ವೇಳೆ ಸೂಚನೆ ಕೊಟ್ಟಿದೆ.

    ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts