ಮುಂಬೈ: ವಸತಿ ಕಟ್ಟಡದ ಚಪ್ಪಡಿ ಕುಸಿದು 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್ನಗರದಲ್ಲಿ ಶುಕ್ರವಾರ ನಡೆದಿದೆ. ನಾಲ್ಕರಿಂದ ಐದು ಮಂದಿ ಅವಶೇಷಗಳ ಅಡಿ ಸಿಲುಕಿರುವ ಮಾಹಿತಿ ಇದೆ.
ಉಲ್ಹಾಸ್ನಗರ ಮಹಾನಗರ ಪಾಲಿಕೆಯ ಪ್ರಕಾರ ನೆಹರೂ ಚೌಕ್ ಬಳಿ ಘಟನೆ ನಡೆದಿದೆ. ಸಾಯಿ ಸಿದ್ಧಿ ಹೆಸರಿನ ಐದು ಅಂತಸ್ತಿನ ಕಟ್ಟಡದ ಚಪ್ಪಡಿ ಕುಸಿದು ದುರ್ಘಟನೆ ಸಂಭವಿಸಿದೆ. ಐದನೇ ಅಂತಸ್ತಿನಲ್ಲಿ ಕುಸಿದ ಚಪ್ಪಡಿಯು ನೆಲಮಹಡಿಯವರೆಗೂ ಅಪ್ಪಳಿಸಿ 8 ರಿಂದ 9 ಮಂದಿಯ ಮೇಲೆ ಬಿದ್ದಿದೆ. ಈ ಘಟನೆ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.
ಉಲ್ಹಾಸ್ನಗರ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 7 ಮಂದಿಯನ್ನು ಅವಶೇಷಗಳ ಅಡಿಯಿಂದ ಹೊರಗೆಳೆಯಲಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ನಾಲ್ಕರಿಂದ ಐದು ಮಂದಿ ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಉಲ್ಹಾಸ್ನಗರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಮೇ 15ರಂದು ಉಲ್ಹಾಸ್ನಗರ ಕ್ಯಾಂಪ್ನ ಮೊಹಿನಿ ಪ್ಯಾಲೇಸ್ ವಸತಿ ಕಟ್ಟಡದ ಚಪ್ಪಡಿ ಕುಸಿದು 5 ಮಂದಿ ಮೃತಪಟ್ಟಿದ್ದರು. (ಏಜೆನ್ಸೀಸ್)
ನನ್ನದು ನಿನ್ನ ಬಾಲ್ಗಳಿಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್ ಉತ್ತರ
ಫಿನ್ಲ್ಯಾಂಡ್ ಪ್ರಧಾನಿಯ ಬ್ರೇಕ್ಫಾಸ್ಟ್ ಬಿಲ್ನಲ್ಲಿ ಅಕ್ರಮ ಶಂಕೆ: ಪೊಲೀಸ್ ತನಿಖೆ ಘೋಷಣೆ
ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..