ಪ್ರಯಾಗರಾಜ್: ಭಾರೀ ಗಲಭೆ ಸೃಷ್ಟಿಸಿದ್ದ ಗಲಭೆಕೋರರ ಪೈಕಿ ಈವರೆಗೆ ಉತ್ತರ ಪ್ರದೇಶದ ಪೊಲೀಸರು 68 ಮಂದಿಯನ್ನು ಬಂಧಿಸಿದ್ದಾರೆ.
ಸಂಗಮ್ ಪಟ್ಟಣದ ಅಟಾಲಾದಲ್ಲಿ ಶುಕ್ರವಾರ ನಡೆದ ಗಲಭೆಯಲ್ಲಿ ಸುಮಾರು 5000 ಗಲಭೆಕೋರರು ಪಾಲ್ಗೊಂಡಿದ್ದರು. ಈ ಪೈಕಿ ಸಿಸಿಟಿವಿ ಸಹಾಯದೊಂದಿಗೆ 68 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನುಳಿದವರ ಶೋಧ ಮುಂದುವರಿಸಲಾಗಿದ್ದು, ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದ ಹಲವರನ್ನು ಸಿಸಿಟಿವಿ ಸಹಾಯದಿಂದ ಪತ್ತೆ ಹಚ್ಚಲಾಗುತ್ತಿದೆ ಎಂದು ಪ್ರಯಾಗ್ ರಾಜ್ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.
ಸದ್ಯ 144ಸೆಕ್ಷನ್ ಜಾರಿಗೊಳಿಸಲಾಗಿದ್ದು, ಜನರ ಗುಂಪು ಸೇರದಂತೆ ಸೂಚನೆ ನೀಡಲಾಗಿದೆ. ಶನಿವಾರವೂ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದೆ. ಇನ್ನುಳಿದ ಗಲಭೆಕೋರರ ಬಂಧನಕ್ಕೆ ಸಿಸಿಟಿವಿ ದೃಶ್ಯಾವಳಿಗಳ ಸಹಾಯ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಯೋಗ, ಯೋಗ್ಯತೆ ಇದ್ದವರು ಯಾರು ಬೇಕಾದ್ರೂ ಸಿಎಂ ಆಗಬಹುದು: ಸಚಿವ ಬಿ.ಸಿ.ಪಾಟೀಲ್