ಚಿತ್ರದುರ್ಗ: ಜಿಲ್ಲಾದ್ಯಂತ ಪ್ರಸಕ್ತ ವರ್ಷ 162 ಕಳವು ಪ್ರಕರಣ ಬೇಧಿಸಿರುವ ಪೊಲೀಸರು 2.06 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಸಂಬಂಧಿಸಿದ ವಾರಸುದಾರರಿಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಸ್ತಾಂತರಿಸಿದರು.
ಉಪವಿಭಾಗ ವ್ಯಾಪ್ತಿಯಲ್ಲಿ ಚಿತ್ರದುರ್ಗ 72, ಹಿರಿಯೂರು 25, ಚಳ್ಳಕೆರೆ 24, ಸೈಬರ್ ಪೊಲೀಸ್ ಠಾಣೆಯಲ್ಲಿ 41 ಸೇರಿ 162 ಪ್ರಕರಣ ದಾಖಲಾಗಿತ್ತು.
ಹೆಚ್ಚುವರಿ ಎಸ್ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್ಪಿಗಳಾದ ಎಚ್.ಆರ್.ಅನಿಲ್ಕುಮಾರ್, ಎಚ್.ಬಿ.ರಮೇಶ್, ಎಸ್.ರೋಷನ್ ಜಮೀರ್, ಎನ್.ಲೋಕೇಶ್ವರಪ್ಪ, ಗಣೇಶ್ ಇದ್ದರು.
*ಬಾಕ್ಸ್*
ವಾಹನ, ಆಭರಣ ಪ್ರಕರಣವೇ ಹೆಚ್ಚು
ನಗದು 13 ಪ್ರಕರಣಗಳ ಪೈಕಿ 55.97 ಲಕ್ಷ ರೂ., ಬಂಗಾರ ಮತ್ತು ಬೆಳ್ಳಿ 33 ಪ್ರಕರಣಗಳ ಪೈಕಿ 35.80 ಲಕ್ಷ ರೂ., ವಾಹನಗಳು 51 ಪ್ರಕರಣಗಳ ಪೈಕಿ 38.82 ಲಕ್ಷ ರೂ., ಇತರೆ 25 ಪ್ರಕರಣಗಳ ಪೈಕಿ 26.08 ಲಕ್ಷ ರೂ. ಸೇರಿ 2.06 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರು ಪಡೆದರು. ನಂತರ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.