ಬೆಂಗಳೂರು : ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ 6 ದುಷ್ಕರ್ಮಿಗಳನ್ನು ಬೆಂಗಳೂರು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇನ್ಸ್ಪೆಕ್ಟರ್ ಜಿ.ಲಕ್ಷ್ಮೀಕಾಂತಯ್ಯ ನೇತೃತ್ವದ ತಂಡವು ಜುಲೈ 7 ರಂದು ಹೆಚ್.ಎ.ಎಲ್. ಮತ್ತು ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಡ್ರಗ್ಪೆಡ್ಲರ್ಗಳ ಎರಡು ಜಾಲಗಳ ಮೇಲೆ ಪ್ರತ್ಯೇಕ ದಾಳಿ ಕಾರ್ಯಾಚರಣೆ ನಡೆಸಿದರು. ಈ ದಾಳಿಯಲ್ಲಿ ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ತಂದು, ಸರಬರಾಜು ಮತ್ತು ಮಾರಾಟದಲ್ಲಿ ತೊಡಗಿದ್ದ ಒಬ್ಬ ಘಾನಾ ದೇಶದ ಪ್ರಜೆ, ಇಬ್ಬರು ಆಂಧ್ರಪ್ರದೇಶದವರನ್ನು ಮತ್ತು 3 ಜನ ಬೆಂಗಳೂರಿನ ನಿವಾಸಿಗಳನ್ನು ಬಂಧಿಸಲಾಯಿತು.
ಇದನ್ನೂ ಓದಿ: VIDEO: ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ ‘ಪಾನೀಪುರಿ ಮದುವೆ’- ಮದುಮಗಳಿಗೆ ವಿಶೇಷ ಅಲಂಕಾರ
ಆರೋಪಿಗಳು ವಿಶಾಖಪಟ್ಟಣದ ಅರಕ್ವೇಲಿ ಪ್ರದೇಶದಿಂದ ಮಾದಕ ವಸ್ತುವಾದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು, ಬೆಂಗಳೂರಿನ ಡ್ರಗ್ ಪೆಡ್ಲರ್ಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನೂ ಮೂವರು ಆಸಾಮಿಗಳು ಇವರೊಂದಿಗೆ ಕಾರ್ಯಪ್ರವೃತ್ತರಾಗಿರುವುದು ತಿಳಿದುಬಂದಿದ್ದು, ಅವರ ಶೋಧ ಕಾರ್ಯ ಆರಂಭವಾಗಿದೆ. ಆರೋಪಿಗಳಿಂದ 28 ಕೆಜಿ ಗಾಂಜಾದೊಂದಿಗೆ, 8 ಮೊಬೈಲ್ ಫೋನುಗಳು, ನಗದು ಹಣ ಮತ್ತಿತರ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್ ತಿಳಿಸಿದ್ದಾರೆ.
ಸೆಲ್ಫಿ ಕ್ಲಿಕ್ಕಿಸಿಕೊಂಡು ಭಾರತದ ಒಲಂಪಿಕ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಸಚಿವ ನಾರಾಯಣಗೌಡ
VIDEO | ಕ್ಯಾಪ್ಟನ್ ಕೂಲ್ ಧೋನಿ ಬರ್ತ್ಡೇಗೆ ಐಸಿಸಿ ವಿಶೇಷ ಕೊಡುಗೆ