ಬೆಂಗಳೂರು: ತೋಟದ ಮನೆಗೆ ಹೋಗಿದ್ದ ಬಿಲ್ಡರ್ ಮನೆಗೆ ನುಗ್ಗಿದ ಕಳ್ಳರು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆರ್ಟಿ ನಗರದಲ್ಲಿ ನಡೆದಿದೆ.
ಆರ್ಟಿ ನಗರ ಬಿಲ್ಡರ್ ಬಿ.ಪಿ.ಶ್ರೀಧರ್ ಮೂರ್ತಿ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್ 29ರ ಬೆಳಗ್ಗೆ 6 ಗಂಟೆಗೆ ಶ್ರೀಧರ್ ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರದ ತೋಟದ ಮನೆಗೆ ಹೋಗಿದ್ದರು. ಮನೆಯ ಸೆಕ್ಯೂರಿಟಿ ಗಾರ್ಡ್ ಭರತ್ ಎಂಬಾತ ಮೇ 3 ರಂದು ಕರೆ ಮಾಡಿ ಮನೆ ಮುಖ್ಯ ದ್ವಾರ ತೆಗೆದಿದೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಕಬೋರ್ಡ್ ಓಪನ್ ಆಗಿತ್ತು. ಅದರಲ್ಲಿದ್ದ 13.80 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.
ಈ ಕುರಿತು ಆರ್.ಟಿ.ನಗರದ ದೂರು ನೀಡಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಬಿಲ್ಡರ್ ಶ್ರೀಧರ್ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದೇವರಜೀವನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಭಾರತದ ಕರೊನಾ ಸಂಕಷ್ಟಕ್ಕೆ ಮಿಡಿದ ಬಹರೈನ್; 40 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ
ಮರದ ಕೆಳಗೇ ಹಾಸಿಗೆ, ಕೊಂಬೆಗಳಲ್ಲೇ ಸಲೈನ್ ಬಾಟೆಲ್! ನಗರಕ್ಕೆ ಬರಲು ಹೆದರಿ ಮರದಡಿ ಮಲಗಿದ ರೋಗಿಗಳು!