More

    ಬಿಲ್ಡರ್​ ಮನೆಯಲ್ಲಿ 57 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

    ಬೆಂಗಳೂರು: ತೋಟದ ಮನೆಗೆ ಹೋಗಿದ್ದ ಬಿಲ್ಡರ್​ ಮನೆಗೆ ನುಗ್ಗಿದ ಕಳ್ಳರು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಆರ್​ಟಿ ನಗರದಲ್ಲಿ ನಡೆದಿದೆ.

    ಆರ್​ಟಿ ನಗರ ಬಿಲ್ಡರ್ ಬಿ.ಪಿ.ಶ್ರೀಧರ್​ ಮೂರ್ತಿ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್​ 29ರ ಬೆಳಗ್ಗೆ 6 ಗಂಟೆಗೆ ಶ್ರೀಧರ್​ ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರದ ತೋಟದ ಮನೆಗೆ ಹೋಗಿದ್ದರು. ಮನೆಯ ಸೆಕ್ಯೂರಿಟಿ ಗಾರ್ಡ್​ ಭರತ್​ ಎಂಬಾತ ಮೇ 3 ರಂದು ಕರೆ ಮಾಡಿ ಮನೆ ಮುಖ್ಯ ದ್ವಾರ ತೆಗೆದಿದೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಕಬೋರ್ಡ್​ ಓಪನ್​ ಆಗಿತ್ತು. ಅದರಲ್ಲಿದ್ದ 13.80 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.

    ಈ ಕುರಿತು ಆರ್​.ಟಿ.ನಗರದ ದೂರು ನೀಡಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಬಿಲ್ಡರ್​ ಶ್ರೀಧರ್​ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದೇವರಜೀವನಹಳ್ಳಿ ಪೊಲೀಸರು ತಿಳಿಸಿದ್ದಾರೆ.

    ಭಾರತದ ಕರೊನಾ ಸಂಕಷ್ಟಕ್ಕೆ ಮಿಡಿದ ಬಹರೈನ್​; 40 ಮೆಟ್ರಿಕ್‌ ಟನ್‌ ಆಕ್ಸಿಜನ್​ ಪೂರೈಕೆ

    ಮರದ ಕೆಳಗೇ ಹಾಸಿಗೆ, ಕೊಂಬೆಗಳಲ್ಲೇ ಸಲೈನ್​ ಬಾಟೆಲ್​! ನಗರಕ್ಕೆ ಬರಲು ಹೆದರಿ ಮರದಡಿ ಮಲಗಿದ ರೋಗಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts