More

    5 ಟಿಎಂಸಿ ಕುಡಿಯುವ ನೀರಿನ ಉದ್ದೇಶಕ್ಕೆ ಕಾಯ್ದಿರಿಸಿದೆ

    ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಘಟಪ್ರಭಾ ಹಿಡಕಲ್ ಜಲಾಶಯದಿಂದ ಅವಕಾಶ ಕಲ್ಪಿಸಲು ಈ ಮೊದಲು ಕಾಯ್ದಿರಿಸಲಾಗಿದ್ದ 4 ಟಿಎಂಸಿ ನೀರಿನ ಬದಲಾಗಿ ಇನ್ನೂ 1 ಟಿಎಂಸಿ ಹೆಚ್ಚಿಸಿ ಒಟ್ಟು 5 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಮಾತ್ರ ಕಾಯ್ದಿರಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ರಾಷ್ಟ್ರೀಯ ಜಲ ನೀತಿಯನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಾಗಲಕೋಟೆ ಪಟ್ಟಣ, ಮುಧೋಳ ಪಟ್ಟಣ, ಬೆಳಗಾವಿ ನಗರ, ಬೆಳಗಾವಿ ಜಿಲ್ಲೆಯ ಇತರೆ ಕೆಲವು ಪ್ರದೇಶಗಳು ಮತ್ತು ಇತರೆ ಸಂಬಂಧಿತ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಹಿಡಕಲ್ ಜಲಾಶಯದಲ್ಲಿ ಈಗ ಕಾಯ್ದಿರಿಸಿದ 4.00 ಟಿಎಂಸಿ ಬದಲಾಗಿ 5.00 ಟಿಎಂಸಿ ನೀರನ್ನು ಘಟಪ್ರಭಾ ನೀರಾವರಿ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ಸೂಚಿಸಿದೆ.

    14/11/2022 ರಂದು ಜರುಗಿದ 2022-23ನೇ ಸಾಲಿನ ಘಟಪ್ರಭಾ ನೀರಾವರಿ ಯೋಜನಾ ಸಲಹಾ ಸಮಿತಿ ಸಭೆಯಲ್ಲಿ ಬಾಗಲಕೋಟೆ ಮತ್ತು ಮುಧೋಳ ನಗರಗಳಿಗೆ ಹಾಗೂ ಇತರ ಬೆಳಗಾವಿ ಜಿಲ್ಲೆಯ ಪ್ರದೇಶಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅವಶ್ಯಕತೆ ಇರುವ ಕುಡಿಯುವ ನೀರನ್ನು ಕಾಯ್ದಿರಿಸಲು ತೀರ್ಮಾನಿಸಲಾಗಿತ್ತು. ಜಿಲ್ಲಾಧಿಕಾರಿ, ಬಾಗಲಕೋಟೆ ಕೋರಿಕೆಯನ್ವಯ ಈ ಮೊದಲು ಕಾಯ್ದಿರಿಸಿದ 4.00 ಟಿಎಂಸಿ ಬದಲಾಗಿ 5.00 ಟಿಎಂಸಿ ನೀರನ್ನು ಕಾಯ್ದಿರಿಸಲು ಸರ್ಕಾರದ ಆದೇಶ ಸಂಖ್ಯೆ: ಜಸಂಇ 13 ಎನ್‌ಐಎನ್ 2023 ದಿನಾಂಕ 10/03/2023 ರಂದು ಹೊರಡಿಸಲಾದ ಆದೇಶದಂತೆ ನಿರ್ದೇಶನ ನೀಡಿದೆ ಎಂದು ಕಾರಜೋಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts