ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಒಟ್ಟು 34 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಅವರಲ್ಲಿ ಕೆಲವು ಮೇಲಧಿಕಾರಿಗಳೂ ಇದ್ದಾರೆ ಎಂದು ವರದಿಯಾಗಿದೆ.
ಭೋಪಾಲ್ ಎಡಿಜಿಪಿ ಉಪೇಂದ್ರ ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದು, ಇಷ್ಟು ಪೊಲೀಸರಿಗೆ ಕರೊನಾ ವೈರಸ್ ತಗುಲಲು ತಬ್ಲಿಘಿಗಳೇ ಕಾರಣ ಎಂದಿದ್ದಾರೆ.
ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ಮರ್ಖಜ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್ಗೆ ಬಂದಿದ್ದ ಹಲವರು ಅಡಗಿದ್ದರು. ಅವರನ್ನೆಲ್ಲ ಹುಡುಕಿ, ಕ್ವಾರಂಟೈನ್ಗೆ ಒಳಪಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಸೋಂಕಿತ ಪೊಲೀಸ್ ಸಿಬ್ಬಂದಿಯ ಕುಟುಂಬವೂ ಅಪಾಯದಲ್ಲಿದೆ. ಈಗಾಗಲೇ 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇದ್ದುದರಲ್ಲಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯಲ್ಲಿ 2100 ಮಂದಿ ಕರೊನಾ ಕರ್ತವ್ಯ ನಿರ್ವಹಣೆ ಶುರುವಾದಾಗಿನಿಂದಲೂ ತಮ್ಮ ಮನೆಗಳಿಗೆ ಹೋಗಿಲ್ಲ. ಹೋಟೆಲ್ಗಳಲ್ಲಿ ಸೆಲ್ಫ್ ಕ್ವಾರಂಟೈನ್ನಲ್ಲಿ ಇದ್ದಾರೆ. ಅವರಿಗೆಲ್ಲ ಪಿಪಿಇ ಕಿಟ್ಗಳನ್ನು, ಸ್ಯಾನಿಟೈಸರ್, ಆಹಾರಗಳನ್ನೆಲ್ಲ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್ಗೆ ಬಂದ ಸುಮಾರು 35 ಮಂದಿಗೆ ಕರೊನಾ ಇದೆ. ಅವರಲ್ಲಿ ವಿದೇಶಿ ಮುಸ್ಲಿಮರೂ ಇದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)
ದೇಶಾದ್ಯಂತ ಒಂದೇ ದಿನ ಐದು ಲಕ್ಷ ಜನರ ಪರೀಕ್ಷೆ, 1,409 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆ