More

    2,500ಕಿಮೀ ಸೈಕಲ್ ಜಾಥಾ ಹಾವೇರಿಗೆ

    ರೋಟರಿ, ಸ್ವಾತಂತ್ರೊೃೀತ್ಸವ, ಸೈಕಲ್, ಜಾಥಾ, Rotary, Independence Day, Cycle, Jatha,

    ಹಾವೇರಿ: ಸ್ವಾತಂತ್ರೃದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ರೋಟರಿ ಸದಸ್ಯರ ಈ ಸೈಕಲ್ ಜಾಥಾ ಬಹಳಷ್ಟು ಅರ್ಥಪೂರ್ಣವಾಗಿದೆ ಎಂದು ರೋಟರಿಯ ಅಸಿಸ್ಟೆಂಟ್ ಗವರ್ನರ್ ಎಸ್.ಎ. ವಜ್ರಕುಮಾರ ಹೇಳಿದರು.
    ಅಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಪ್ರಕಾಶ ಬರಳು ಹಾಗೂ ಡಾ. ಬಿ.ಎಂ. ಶ್ರೀನಿವಾಸ ಬಿರುಮಾನಹಳ್ಳಿ ಅವರು ಹಮ್ಮಿಕೊಂಡಿರುವ 2,500ಕಿಮೀ ಸೈಕಲ್ ಜಾಥಾ ನಗರಕ್ಕೆ ಆಗಮಿಸಿದ ವೇಳೆ ಹಾವೇರಿಯ ರೋಟರಿ ಹಾಗೂ ರೋಟರಾಕ್ಟ್ ಕ್ಲಬ್ ಸದಸ್ಯರು ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
    ಸೈಕಲ್ ಜಾಥಾ ಹಮ್ಮಿಕೊಂಡಿರುವ ಚನ್ನರಾಯಪಟ್ಟಣ ರೋಟರಿ ಸದಸ್ಯರಾದ ಪ್ರಕಾಶ ಬರಳು ಮಾತನಾಡಿ, ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಮಾಜದ ಸ್ವಾಸ್ಥೃ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವ ಸಂಕಲ್ಪ ಹೊತ್ತು 20ದಿನಗಳ ಒಟ್ಟು 2500ಕಿಮೀ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
    ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸುರೇಶ ಕಡಕೋಳ, ಕಾರ್ಯದರ್ಶಿ ಗಣೇಶ ಮುಷ್ಟಿ, ಎಸ್.ಸಿ. ಹಿರೇಮಠ, ಮಲ್ಲಿಕಾರ್ಜುನ ಹಂದ್ರಾಖ, ರವಿ ಹಿಂಚಿಗೇರಿ, ರೋಟ್ರಾಕ್ಟ್ ಅಧ್ಯಕ್ಷ ಉಜ್ವಲ ಹಿರೇಗೌಡರ, ಚೇತನ ಕೋಡಿಹಳ್ಳಿ, ಯಶು ಮಲ್ಲನಗೌಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts