ತಿರುವನಂತಪುರಂ: ಅದೃಷ್ಟ ಅಂದರೆ ಹೇಗಿರಬೇಕು ಎಂದು ಯಾರಾದರೂ ಕೇಳಿದರೆ, ಅದಕ್ಕೆ ಉದಾಹರಣೆಯಂತಿದೆ ಈ ಸ್ಟೋರಿ.
ಹೌದು, ಭಾನುವಾರ ಕೇರಳ ಸರ್ಕಾರದ ತಿರುವೋಣಂ ಬಂಪರ್ ಲಾಟರಿ 2020ರ ಫಲಿತಾಂಶ ಘೋಷಣೆ ಮಾಡುವ ಮುನ್ನ 24 ವರ್ಷದ ಅನಂತು ವಿಜಯನ್ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ಈ ಬಾರಿಯ ಲಾಟರಿ ವಿಜೇತ ನಾನೇ ಎಂದು ಹೇಳಿ ತನ್ನದೇ ಜೋಕ್ಸ್ಗೆ ಗಹಗಹಿಸಿ ನಕ್ಕಿದ್ದ. ತಾನಾಡಿದ ಜೋಕ್ಸ್ ನಿಜವಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಹೀಗಿರುವಾಗ ಭಾನುವಾರ ಸಂಜೆ ತನ್ನ ಲಾಟರಿಯ ಫಲಿತಾಂಶವನ್ನು ವೀಕ್ಷಿಸಿದ ಯುವಕನಿಗೆ ಬಹುದೊಡ್ಡ ಸರ್ಪ್ರೈಸ್ ಕಾದಿತ್ತು.
ಲಾಟರಿಯ ಒಂದೊಂದೆ ನಂಬರ್ ನೋಡುತ್ತಾ ಬಿಸಿಯುಸಿರು ಬಿಡುತ್ತಿದ್ದ ಇಡುಕ್ಕಿ ಮೂಲದ ವಿಜಯನ್ ಕೊನೆಯ ನಂಬರ್ ನೋಡುತ್ತಿದ್ದಂತೆಯೇ ತನ್ನ ಜೋಕ್ಸ್ ನಿಜವಾಯ್ತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ. ಒಂದೇ ದಿನದಲ್ಲಿ ತಾನೂ ಕೋಟ್ಯಾಧಿಪತಿಯಾಗುತ್ತೇನೆಂಬ ಯಾವುದೇ ಆಲೋಚನೆಯೂ ಇರಲಿಲ್ಲ. ಇದೀಗ 12 ಕೋಟಿ ರೂ. ಒಡೆಯನಾಗಿರುವ ವಿಜಯನ್ ಸಂತೋಷದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಇದನ್ನೂ ಓದಿ: ಮೂರು ಚಿತ್ರಗಳಿಗೆ ಕಾರ್ತಿಕ್ ಆರ್ಯನ್ ಪಡೆದ ಸಂಭಾವನೆ 75 ಕೋಟಿಯಂತೆ!
ಅಂದಹಾಗೆ, ಇಡುಕ್ಕಿಯ ಕಟ್ಟಪ್ಪಣದಲ್ಲಿರುವ ಥೋವಲ್ ನಿವಾಸಿಯಾಗಿರುವ ವಿಜಯನ್ ಎರ್ನಾಕುಲಂನ ಕಡವಂಥ್ರದ ಪೊನ್ನೆಥಾ ದೇವಸ್ಥಾನದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯನ್ ತುಂಬು ಕುಟುಂಬದಿಂದ ಬಂದವರು. ಇಬ್ಬರು ಒಡಹುಟ್ಟಿದವರಿದ್ದಾರೆ. ತಂದೆ ಪೇಂಟರ್ ಆಗಿದ್ದಾರೆ. ಸಹೋದರಿ ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಕರೊನಾ ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಫಲಿತಾಂಶ ನೋಡಿದ ನನಗೆ ನಿಜಕ್ಕೂ ಶಾಕ್ ಆಯಿತು. ನಿಜಕ್ಕೂ ಆ ದಿನ ರಾತ್ರಿ ನಾನು ನಿದ್ರೆಯೇ ಮಾಡಲಿಲ್ಲ. ಫಲಿತಾಂಶ ನೋಡಿದ ಬೆನ್ನಲ್ಲೇ ಮನೆಗೆ ಕರೆ ಮಾಡಿದೆ. ನಾನು ಹೇಳಿದ್ದನ್ನು ಕೇಳಿ ಕುಟುಂಬವೇ ನಂಬಲಿಲ್ಲ ಎಂದು ವಿಜಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೆ ವಿಜಯನ್, BR 75 TB 173964 ಸಂಖ್ಯೆಯ ಲಾಟರಿಯನ್ನು ಕೊಡವಂಥ್ರಾದಲ್ಲಿನ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನಿಂದ ಕೊಂಡುಕೊಂಡಿದ್ದ. ಇದೀಗ 12 ಕೋಟಿ ಲಾಟರಿ ಒಡೆದಿದ್ದು, ತೆರಿಗೆ ಮತ್ತು ಏಜೆನ್ಸಿ ಕಮಿಷನ್ ಕಳೆದ 7.56 ಕೋಟಿ ರೂ. ಪಡೆದುಕೊಳ್ಳಲಿದ್ದಾರೆ. ಈ ಹಿಂದೆಯೂ ವಿಜಯನ್ಗೆ 5 ಸಾವಿರ ಲಾಟರಿ ಹೊಡೆದಿತ್ತು. ವಿಜಯನ್ ಹೊರತುಪಡಿಸಿ ಇನ್ನು ಆರು ಮಂದಿಗೆ 1 ಕೋಟಿ ರೂ. ಲಾಟರಿ ಹೊಡೆದಿದೆ. (ಏಜೆನ್ಸೀಸ್)
ನಾಲೆಯಲ್ಲಿ ತೇಲಿಬಂದ ವಸ್ತು ನೋಡಿ ಬೆಚ್ಚಿಬಿದ್ದ ಜನರು: ಪೊಲೀಸರಿಗೂ ನಿಗೂಢವಾಯ್ತು ಪ್ರಕರಣ!