More

    ಸಹೋದರನ ಜತೆ ಜಗಳವಾಡಿ ಮನೆ ಬಿಟ್ಟ ಯುವತಿ; ನಂತ್ರ ಆಕೆ ಬಾಳಲ್ಲಿ ನಡೆದಿದ್ದು ಘೋರ…

    ಹೈದರಾಬಾದ್: ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಯುವತಿ (21) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ  ಪಾತಬಸ್ತಿ ಬಂಡ್ಲಗೂಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

    ಗೌಸನಗರ ಮುಳಕಲಪೆಂಟ ಶ್ರೀಕಾಂತ್​ (22) ಮತ್ತು ಅಫಜಲ್​ಗಂಜ್​ನ ಪಾನಗಂಟಿ ಕಾಶಿವಿಶ್ವನಾಥ್​ (32) ಬಂಧಿತ ಆರೋಪಿಗಳು. ಪೊಲೀಸ್​ ಠಾಣೆಗೆ ತೆರಳುತ್ತಿದ್ದ ಯುವತಿಗೆ ಡ್ರಾಪ್​ ಕೊಡುವುದಾಗಿ ನಂಬಿಸಿ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆ ದಿನ ರಾತ್ರಿ ನಡೆದಿದ್ದು: ಸಂತ್ರಸ್ತೆ ಯುವತಿ ಸೂರ್ಯಪೇಟ ಮೂಲದವರು. ತನ್ನ ಸಹೋದರ ಮತ್ತು ತಾಯಿಯೊಂದಿಗೆ ವಾಸವಾಗಿದ್ದಳು ಸಹೋದರನ ಜೊತೆ ಜಗಳ ಮಾಡಿಕೊಂಡಿದ್ದಾಳೆ. ಕೋಪಗೊಂಡ ಸಹೋದರ ಹೊಡೆದಿದ್ದಾನೆ. ನೊಂದ ಯುವತಿ ಒಂಟಿಯಾಗಿ ಹೈದರಾಬಾದ್ ಬಸ್​ ಹತ್ತಿದ್ದಾಳೆ. ರಾತ್ರಿ 10;30 ಗಂಟೆಗೆ ಹೈದರಾಬಾದ್​ನ ಎಂಜಿಬಿಎಸ್​ ಬಸ್​ ನಿಲ್ದಾಣದಲ್ಲಿ ಇಳಿದು ಅಫ್ಜಲ್​ಗಂಜ್​​ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಶ್ರೀಕಾಂತ್​ ಮತ್ತು ವಿಶ್ವನಾಥ್​ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ವಿಚಾರಿಸಿದ್ದಾರೆ. ತಾನು ಸಮೀಪದ ಪೊಲೀಸ್​ ಠಾಣೆಗೆ ಹೋಗುತ್ತಿರುವುದಾಗಿ ಯುವತಿ ಹೇಳಿದ್ದಾಳೆ. ಈ ವೇಳೆ ಆರೋಪಿಗಳು ನಾವು ಅಲ್ಲಿಗೆ ಹೋಗುತ್ತಿದ್ದೇವೆ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಬೈಕ್​ ಹತ್ತಿಸಿಕೊಂಡಿ ಐಸ್​​ಕ್ರೀಂ ಕೊಟ್ಟು ನಂಬಿಕೆ ಗಿಟ್ಟಿಸಿಕೊಂದ್ದಾರೆ.

    ನಂತರ ನೇರವಾಗಿ ಬಂಡ್ಲಗುಡ ಪೊಲೀಸ್​ ಠಾಣಾ ವ್ಯಾಪ್ತಿಯ ಲೇಕ್​ವ್ಯೂ ಹಿಲ್ಸ್​ ಬಳಿಯ ಆರೋಪಿ ಶ್ರೀಕಾಂತ್​ಗೆ ಒಡೆತನದ ಸ್ಕ್ರ್ಯಾಪ್​ ಗೋಡೌನ್​ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ನಂತರ ಸಂತ್ರೆಸ್ತೆಯನ್ನು ಬೇರೆಡೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ಯುವತಿ ಜೋರಾಗಿ ಕಿರುಚಿದ್ದಾಳೆ. ಕಿರುಚಾಟ ಕೇಳಿ ಸ್ಥಳೀಯರು ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಘಟನೆಯ ಸ್ಥಳಕ್ಕೆ ಚಂದ್ರಾಯಾನಗುಟ್ಟ ಇನ್ಸ್​ಪೆಕ್ಟರ್​ ಕೆ. ಗುರುನಾಥ್​ ಹಾಗೂ ಬಂಡ್ಲಗುಡ ಎಸ್​ಐ ವೆಂಕಟೇಶ್ವರ್​ಜಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅತ್ಯಾಚಾರವೆಸಗಿದ ಸ್ಥಳವನ್ನು ಸಂತ್ರೆಸ್ತೆ ಯುವತಿ ತೋರಿಸಿದ್ದಾಳೆ. ಇದು ಆರೋಪಿ ಶ್ರೀಕಾಂತ್​ಗೆ ಸೇರಿದ್ದು ಎಂದು ಸ್ಥಳೀಯ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ಮೊಹಮ್ಮದ್​ ಶಾಕೀರ್​​ ಅಲಿ ತಿಳಿಸಿದರು. (ಏಜೆನ್ಸೀಸ್​ )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts