ಹೈದರಾಬಾದ್: ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಯುವತಿ (21) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಪಾತಬಸ್ತಿ ಬಂಡ್ಲಗೂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ಗೌಸನಗರ ಮುಳಕಲಪೆಂಟ ಶ್ರೀಕಾಂತ್ (22) ಮತ್ತು ಅಫಜಲ್ಗಂಜ್ನ ಪಾನಗಂಟಿ ಕಾಶಿವಿಶ್ವನಾಥ್ (32) ಬಂಧಿತ ಆರೋಪಿಗಳು. ಪೊಲೀಸ್ ಠಾಣೆಗೆ ತೆರಳುತ್ತಿದ್ದ ಯುವತಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ದಿನ ರಾತ್ರಿ ನಡೆದಿದ್ದು: ಸಂತ್ರಸ್ತೆ ಯುವತಿ ಸೂರ್ಯಪೇಟ ಮೂಲದವರು. ತನ್ನ ಸಹೋದರ ಮತ್ತು ತಾಯಿಯೊಂದಿಗೆ ವಾಸವಾಗಿದ್ದಳು ಸಹೋದರನ ಜೊತೆ ಜಗಳ ಮಾಡಿಕೊಂಡಿದ್ದಾಳೆ. ಕೋಪಗೊಂಡ ಸಹೋದರ ಹೊಡೆದಿದ್ದಾನೆ. ನೊಂದ ಯುವತಿ ಒಂಟಿಯಾಗಿ ಹೈದರಾಬಾದ್ ಬಸ್ ಹತ್ತಿದ್ದಾಳೆ. ರಾತ್ರಿ 10;30 ಗಂಟೆಗೆ ಹೈದರಾಬಾದ್ನ ಎಂಜಿಬಿಎಸ್ ಬಸ್ ನಿಲ್ದಾಣದಲ್ಲಿ ಇಳಿದು ಅಫ್ಜಲ್ಗಂಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಶ್ರೀಕಾಂತ್ ಮತ್ತು ವಿಶ್ವನಾಥ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ವಿಚಾರಿಸಿದ್ದಾರೆ. ತಾನು ಸಮೀಪದ ಪೊಲೀಸ್ ಠಾಣೆಗೆ ಹೋಗುತ್ತಿರುವುದಾಗಿ ಯುವತಿ ಹೇಳಿದ್ದಾಳೆ. ಈ ವೇಳೆ ಆರೋಪಿಗಳು ನಾವು ಅಲ್ಲಿಗೆ ಹೋಗುತ್ತಿದ್ದೇವೆ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಬೈಕ್ ಹತ್ತಿಸಿಕೊಂಡಿ ಐಸ್ಕ್ರೀಂ ಕೊಟ್ಟು ನಂಬಿಕೆ ಗಿಟ್ಟಿಸಿಕೊಂದ್ದಾರೆ.
ನಂತರ ನೇರವಾಗಿ ಬಂಡ್ಲಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಲೇಕ್ವ್ಯೂ ಹಿಲ್ಸ್ ಬಳಿಯ ಆರೋಪಿ ಶ್ರೀಕಾಂತ್ಗೆ ಒಡೆತನದ ಸ್ಕ್ರ್ಯಾಪ್ ಗೋಡೌನ್ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ನಂತರ ಸಂತ್ರೆಸ್ತೆಯನ್ನು ಬೇರೆಡೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ಯುವತಿ ಜೋರಾಗಿ ಕಿರುಚಿದ್ದಾಳೆ. ಕಿರುಚಾಟ ಕೇಳಿ ಸ್ಥಳೀಯರು ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಘಟನೆಯ ಸ್ಥಳಕ್ಕೆ ಚಂದ್ರಾಯಾನಗುಟ್ಟ ಇನ್ಸ್ಪೆಕ್ಟರ್ ಕೆ. ಗುರುನಾಥ್ ಹಾಗೂ ಬಂಡ್ಲಗುಡ ಎಸ್ಐ ವೆಂಕಟೇಶ್ವರ್ಜಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತ್ಯಾಚಾರವೆಸಗಿದ ಸ್ಥಳವನ್ನು ಸಂತ್ರೆಸ್ತೆ ಯುವತಿ ತೋರಿಸಿದ್ದಾಳೆ. ಇದು ಆರೋಪಿ ಶ್ರೀಕಾಂತ್ಗೆ ಸೇರಿದ್ದು ಎಂದು ಸ್ಥಳೀಯ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ ಶಾಕೀರ್ ಅಲಿ ತಿಳಿಸಿದರು. (ಏಜೆನ್ಸೀಸ್ )