More

    ಭೀಕರ ಸಿಲಿಂಡರ್ ಸ್ಫೋಟ – ಕನಿಷ್ಠ 20 ಜನರಿಗೆ ಗಾಯ, ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯ

    ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರದ ಲಾಲ್​ಬಾಗ್ ಪ್ರದೇಶದಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಕನಿಷ್ಠ 20 ಜನ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಎಎನ್​ಐ ವರದಿ ಮಾಡಿದೆ.

    ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್​ (ಬಿಎಂಸಿ) ಮೂಲಗಳ ಮಾಹಿತಿ ಉಲ್ಲೇಖಿಸಿದ ವರದಿ ಪ್ರಕಾರ, ಸ್ಥಳಕ್ಕೆ ಅಗ್ನಿಶಾಮಕ ಸೇವೆಯ ಎರಡು ವಾಹನಗಳು ಮತ್ತು ಎರಡು ಜಂಬೋ ಟ್ಯಾಂಕರ್​ಗಳನ್ನು ರವಾನಿಸಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ.

    ಇದನ್ನೂ ಓದಿ: Web Exclusive | ಎಲ್ಲ ಪಿಂಚಣಿದಾರರಿಗೂ ನೇರ ನಗದು; ಮನಿ ಆರ್ಡರ್ ವ್ಯವಸ್ಥೆಗೆ ಬದಲಿ ಮಾರ್ಗ

    ಲಾಲ್​ಬಾಗ್​ ಪ್ರದೇಶದ ಗಣೇಶ ಗಲ್ಲಿಯಲ್ಲಿರುವ ಸಾರಾಭಾಯಿ ಬಿಲ್ಡಿಂಗ್​ನ ಎರಡನೆ ಮಹಡಿಯಲ್ಲಿ ಬೆಳಗ್ಗೆ 7.20ಕ್ಕೆ ಈ ಸ್ಫೋಟ ಸಂಭವಿಸಿದೆ. ಈ ಕಟ್ಟಡದಲ್ಲಿ ಒಟ್ಟು ಗ್ರೌಂಡ್ ಮತ್ತು ನಾಲ್ಕು ಮಹಡಿಗಳಿವೆ. ಸ್ಫೋಟದ ತೀವ್ರತೆಗೆ ಗಾಯಗೊಂಡ 16 ಜನರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 12 ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೂ, ನಾಲ್ವರನ್ನು ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. (ಏಜೆನ್ಸೀಸ್)

    ಅಕಾಲಿದಳದ ನಾಯಕಿ ಹರ್​ಸಿಮ್ರತ್ ಕೌರ್ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts