More

    ಕರೊನಾ ಆತಂಕದಲ್ಲಿ ಕಿಚ್ಚ ಸುದೀಪ್​!; ಇಡೀ ರಸ್ತೆ ಸೀಲ್​ಡೌನ್​, ವ್ಯಾಪಾರ ವಹಿವಾಟು ನಿರ್ಬಂಧ…

    ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಕರೊನಾ ಮಹಾಮಾರಿ ಆವರಿಸುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಲಾಕ್​ಡೌನ್​ಗೆ ಪಟ್ಟು ಹಿಡಿದರೂ, ಸರ್ಕಾರ ಮಾತ್ರ ರಾಜಾರೋಷವಾಗಿ ಎಲ್ಲದಕ್ಕೂ ಅನುಮತಿ ನೀಡಿ, ಇದೀಗ ತಾನೇ ಕೈ ಕೈ ಹಿಸುಕಿಕೊಳ್ಳುತ್ತಿದೆ. ಖುದ್ದು ವೈದ್ಯಕೀಯ ಶಿಕ್ಷಣ ಸಚಿವರ ಮನೆಯವರನ್ನೂ ಈ ಮಾರಿ ಬಿಟ್ಟಿಲ್ಲ. ಇದೀಗ ಹೊಸ ಅಪ್​ಡೇಟ್​ ಮಾಹಿತಿ ಪ್ರಕಾರ, ಸ್ಯಾಂಡಲ್​ವುಡ್​ ನಟ ಸುದೀಪ್​ ಸಹ ಕರೊನಾ ಆತಂಕದಲ್ಲಿದ್ದಾರೆ.

    ಇದನ್ನೂ ಓದಿ: ರಿಷಬ್ ಶೆಟ್ಟಿ ‘ಗಿರಿಕಥೆ‘ಗೆ ಹುಡುಗಿ ಬೇಕಂತೆ!; 18ರಿಂದ 28 ವಯಸ್ಸಿನೊಳಗೇ ಇರಬೇಕಂತೆ!

    ಹೌದು, ಜೆಪಿ ನಗರದ ಸುದೀಪ್ ಮನೆಗೆ ಹೊಂದಿಕೊಂಡಿರುವ ಮನೆಯಲ್ಲಿ ವಾಸವಿದ್ದ ಇಬ್ಬರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದ್ದು, ಇಡೀ ಏರಿಯಾದಲ್ಲಿ ಆತಂಕ ಸೃಷ್ಟಿಯಾಗಿದೆ. ವ್ಯಾಪಾರಿ ಕುಟುಂಬದ ಇಬ್ಬರಲ್ಲಿ ಕರೊನಾ ಪಾಸಿಟಿವ್​ ಕಂಡುಬಂದಿದ್ದು, 40ಕ್ಕೂ ಅಧಿಕ ಮಂದಿ ಇವರ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗಿದೆ. ಇವರೆಲ್ಲರನ್ನೂ ಪತ್ತೆ ಮಾಡಿ ಕ್ವಾರಂಟೈನ್​ ಮಾಡುವ ಕಾರ್ಯ ನಡೆಯುತ್ತಿದೆ. ಸೋಕಿಂತರ ಕುಟುಂಬದವರು, ಚಿಕ್ಕಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ಆ ಪ್ರದೇಶದಲ್ಲಿಯೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ.

    ಇದನ್ನೂ ಓದಿ: ಕೆಜಿಎಫ್​ ಚಿತ್ರತಂಡಕ್ಕೆ ಅಭಿಮಾನಿಗಳ ಈ ಬೇಡಿಕೆ; ಈಡೇರಿಸುತ್ತಾರಾ ನಿರ್ದೇಶಕರು​?

    ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೆ.ಪಿ.ನಗರದ 6 ನೇ ಹಂತದ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಓಡಾಟ ಮತ್ತು ವ್ಯಾಪಾರ ವಹಿವಾಟನ್ನು ನಿರ್ಬಂಧಿಸಲಾಗಿದೆ.

    ಹೋರಾಟಕ್ಕೆ ಸಿದ್ಧರಾದ ಯಶ್​ ಮತ್ತು ರಾಧಿಕಾ!; ಪುತ್ರಿ ಐರಾ ಸಹ ಭಾಗಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts